September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಲ್ಲಿ ದೇವಸ್ಥಾನದ ವಠಾರದಲ್ಲಿ ಸಂಗಮ ಕಲಾವಿದರು ಉಜಿರೆ ಇದರ 14ನೇ ವರ್ಷದ ವಾರ್ಷಿಕೋತ್ಸವ; ಸನ್ಮಾನ

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿ ಹಾಗೂ ಗಣಪತಿ ದೇವರಿಗೆ ಮೇ 11ರಂದು ನೀಲೇಶ್ವರದ ವೇದಮೂರ್ತಿ
ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ, ಗಣ ಹೋಮ ಬಿಂಬಶುದ್ದಿ ಕಲಶ ಪೂಜೆ, ಕಲಶಾ ಅಭಿಷೇಕ ನೆರವೇರಿತು,

ಸಂಜೆ ನಡೆದ ಉಜಿರೆ ಸಂಗಮ ಕಲಾವಿದರ ವತಿಯಿಂದ, 14ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಕೆ ಧನಂಜಯ ರಾವ್ ವಹಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುನಿರಾಜ ಅಜ್ರಿ ಮಾಜಿ ಅಧ್ಯಕ್ಷ ವ್ಯವಸಾಯ ಸೇವಾ ಸಹಕಾರಿ ಸಂಘ ಬೆಳ್ತಂಗಡಿ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೆನೇಜಿ, ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ ಸೇನರಬೆಟ್ಟು, ಕೊಲ್ಲಿ ದೇವಸ್ಥಾನ ಆಡಳಿತ ಅಧಿಕಾರಿ ಮೋಹನ್ ಬಂಗೇರ , ಕೇಶವ ಪಡಕೆ, ಪ್ರಧಾನ ಕಾರ್ಯದರ್ಶಿ ದಾಸಪ್ಪ ಗೌಡ ಕಾಂಜಾನು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲೋಕೇಶ್ ರಾವ್, ಹಿರಿಯ ರಂಗ ಕಲಾವಿದ ಹಾಗೂ ಸಾಹಿತಿ, ಸದಾನಂದ, ಬಿ, ಮುಂಡಾಜೆ, ಗಿರೀಶ್ ಹೊಳ್ಳ, ಚಿದಾನಂದ ರಾವ್, ಉಪಸ್ಥಿತರಿದ್ದರು,


ಈ ವೇಳೆ ಸಂಗಮ ಕಲಾವಿದರ ವತಿಯಿಂದ ಸದಾನಂದ ಮುಂಡಾಜೆ ಅವರನ್ನು ಸನ್ಮಾನಿಸಲಾಯಿತು. ಹಾಗೂ ಬಿಕೆ ಧನಂಜಯರಾವ್, ಲೋಕೇಶ್ ರಾವ್ ಬಿಕೆ, ಅರಣ್ಯ ಇಲಾಖೆ ಸಿಬ್ಬಂದಿ ರಾಜು, ಹಾಗೂ ಇತರ ಸಮಿತಿಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಾನಂದ ಮುಂಡಾಜೆ ರವರು ಮನುಷ್ಯನ ದೇಹಕ್ಕೆ ಮಾತ್ರ ವಯಸ್ಸು ಕಲಾ ಸೇವೆಗೆ ವಯಸ್ಸಿನ ಅಡ್ಡಿ ಬರುವುದಿಲ್ಲ ನನ್ನ ಜೀವನದಲ್ಲಿ ಸುಮಾರು 25ಕ್ಕೂ ಹೆಚ್ಚು ಜನರಿಗೆ ಯಕ್ಷಗಾನದ ತರಬೇತಿ ನೀಡಿ, ಅವರ ಪ್ರತಿಭೆಯನ್ನು, ದೇಶದಾದ್ಯಂತ, ಪಸರಿಸುವಂತೆ ಮಾಡಿದ ತೃಪ್ತಿ ನನಗಿದೆ, ಅಂತ ಪ್ರತಿಭೆಗಳನ್ನು, ಗುರುತಿಸುವ ಇನ್ನಷ್ಟು ವೇದಿಕೆಗಳು, ಅವರಿಗೆಲ್ಲಾ ಸಿಗಲಿ, ನನ್ನ ವೃತ್ತಿಜೀವನಕೆ ಅಂಕದ ಪರದೆ ಬಿದ್ದಿರಬಹುದು, ಆದರೆ ನನ್ನ ಪ್ರತಿಭೆಗೆ ಬಿದ್ದಿಲ್ಲ, ಇನ್ನು ಮುಂದೆ ಕೂಡ ನನ್ನ ಸೇವೆ ಮುಂದುವರಿಯಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಲ್ಲಿ, ಭುಜಬಲಿ ಧರ್ಮಸ್ಥಳ, ಸತೀಶ್ ರಾವ್, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಸಂಗಮ ತಂಡದ ಸದಸ್ಯ ಅಶೋಕಚಾರ್ಯ, ಗಿರೀಶ್ ಹೊಳ್ಳ, ಹಾಗೂ ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಜ್ಯೋತಿ ವಿಜಯ ಗೌಡ ಇವರ ತಂಡದ ವತಿಯಿಂದ, ಕೊಲ್ಲಿ ಡುಂತಿ ದುರ್ಗೆ, ತುಳು ಭಕ್ತಿದ ಸುಗಿಪು, ಪೋಸ್ಟರ್ ಬಿಡುಗಡೆ ಮಾಡುವುದರ ಜೊತೆಗೆ ಇದನ್ನುಲೆಡ್ ಪರದೆಯಲ್ಲಿ ವಿಸ್ತರಿಸಲಾಯಿತು
ವಿನಯ ಚಂದ್ರ ಸೇನರ ಬೆಟ್ಟು ಸ್ವಾಗತಿಸಿ, ರಮೇಶ್ ಫೈಲಾರ್ ವಂದಿಸಿದರು, ಪುಷ್ಪಕಲಾ ಕೊಲ್ಲಿ ಪಾಲು ನಿರೂಪಿಸಿದರು,

ನಂತರ ಸಂಗಮ ಕಲಾವಿದರ ತಂಡದಿಂದ ಸುಬ್ಬು ಸಂಟ್ಯಾರ್ ವಿರಚಿತ ”ಪಚ್ಚು ಪಾತೆರೊಡು” ನಾಟಕ
ಪ್ರದರ್ಶನಗೊಂಡಿತು

Related posts

ಅಳದಂಗಡಿಯಲ್ಲಿ ಕಟ್ಟೂರು ಕಾಂಕ್ರೀಟ್ ಉತ್ಪನ್ನಗಳ ತಯಾರಿಕ ಘಟಕ ಶುಭಾರಂಭ:ಅತ್ಯುತ್ತಮ ಗುಣಮಟ್ಟದ ಸಾಲಿಡ್ ಬ್ಲಾಕ್-ಕಾಂಕ್ರೀಟ್ ಕಂಪೌಂಡ್ ವಾಲ್‌, ಕಾಳುಮೆಣಸು ಬೇಲಿ ಕಂಬ ಲಭ್ಯ

Suddi Udaya

ಬೆಳ್ತಂಗಡಿ : ನಾಳೆ(ಜ.4) ವಿದ್ಯುತ್ ನಿಲುಗಡೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

Suddi Udaya

ನಾರಾವಿ ಗ್ರಾಮ ಸಭೆ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಗ್ರಾಮಸ್ಥರ ಚರ್ಚೆ

Suddi Udaya

ಹುಣ್ಸೆಕಟ್ಟೆಯಲ್ಲಿ ನಾಯಿಗಳ ದಾಳಿಯಿಂದ ಬಿದ್ದು ಗಾಯಗೊಂಡ ಜಿಂಕೆ

Suddi Udaya

‘ಮೋದಿಜೀಯವರ ಅಧಿಕಾರವಧಿಯಲ್ಲಿ ಆಯುರಾರೋಗ್ಯ ಲಭಿಸಲಿ’ ಎಂದು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ 120 ಅಗೇಲು ರಂಗಪೂಜೆ

Suddi Udaya
error: Content is protected !!