ನಾಲ್ಕೂರು ರಾಮನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ಬಳಂಜ: ನಾಲ್ಕೂರು ಗ್ರಾಮದ ರಾಮನಗರದಲ್ಲಿ ಮಕ್ಕಳ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.

ಮಕ್ಕಳೇ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪುಟಾಣಿ ಮಕ್ಕಳು ಪ್ರಾರ್ಥನೆ ಹಾಡಿದರು.

ಅತಿಥಿಯಾಗಿ ಸ್ತ್ರೀ ಶಕ್ತಿ ಸದಸ್ಯರಾದ ಸುಂದರಿ ಮತ್ತು ಯಶೋಧ, ಐರಿನಿ ಕ್ರಾಸ್ತ ಮಗುವಿನ ಅಜ್ಜಿ, ಕಮಿಟಿಯ ಸದಸ್ಯರಾದ ಪುಷ್ಪಲತಾ ಭಾಗವಹಿಸಿ ಮಕ್ಕಳಿಗೆ ಶುಭಾಶಯ ಸಲ್ಲಿಸಿದರು.

ಅಧ್ಯಕ್ಷರಾಗಿ ಪುಟಾಣಿ ಸ್ಮಯ ಎಸ್ ಕೋಟ್ಯಾನ್ ಆಸನ ಅಲಂಕರಿಸಿ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯ ಸಲ್ಲಿಸಿದರು.

ಆಶಾ ಕಾರ್ಯಕರ್ತೆ ಗೀತಾರವರು ಸ್ವಾಗತಿಸಿದರು, ಸಹಾಯಕಿ ನಳಿನಿಯವರು ವಂದಿಸಿದರು.

Leave a Comment

error: Content is protected !!