ಬೆಳ್ತಂಗಡಿ: ಕೇಂದ್ರ ಸರಕಾರದ ವಿದ್ಯುತ್ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ

Suddi Udaya

Updated on:

ಬೆಳ್ತಂಗಡಿ: ವಿದ್ಯುತ್ ಖಾಸಗೀಕರಣ ನಿಲ್ಲಿಸಿ ವಿದ್ಯುತ್ ತಿದ್ದುಪಡಿ ಮಸೂದೆ 2022 ನ್ನು ಹಿಂಪಡೆಯಿರಿ ಎಂದು ವಿದ್ಯುತ್ ಮಾರಾಟ ಮಾಡುವ ಕೇಂದ್ರ ಸರಕಾರ ಜನವಿರೋಧಿ ಧೋರಣೆ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳ, ಸಮಾನ ಮನಸ್ಕ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಜಂಟಿ ಪ್ರತಿಭಟನೆಯು ನ.22 ರಂದು ಮೆಸ್ಕಾಂ ಕಚೇರಿ ಎದುರು ನಡೆಯಿತು.

ಬೆಳ್ತಂಗಡಿ ನಿಲ್ದಾಣದಿಂದ ಮೆಸ್ಕಾಂ ಕಚೇರಿ ತನಕ ಕೇಂದ್ರ ಸರಕಾರ ನಡೆಯನ್ನು ಖಂಡಿಸಿ ಕಾಲ್ನಡಿಗೆ ಜಾಥಾ ನಡೆಯಿತು.

ನಂತರ ಮೆಸ್ಕಾಂ ಇಲಾಖೆಯ ಪ್ರಭಾರ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರಕ್ಸ್ ರವರ್ ಮೂಲಕ ಮನವಿಯನ್ನು ಪ್ರಧಾನಿ ಮೋದಿಯವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ, ಸಿಪಿಎಂ ಮುಖಂಡ ಬಿ.ಎಂ ಭಟ್, ಬ್ಲಾಕ್ ಕಾಂಗ್ರೆಸ್ ಉಭಯ ಘಟಕದ ಅಧ್ಯಕ್ಷರುಗಳಾದ ನಾಗೇಶ್, ಸತೀಶ್ ಕಾಶಿಪಟ್ಣ , ಜಯವಿಕ್ರಮ ಕಲ್ಲಾಪು, ಉಷಾ ಶರತ್, ಧರಣೇಂದ್ರ ಕುಮಾರ್, ಕರ್ನಾಟಕ ರೈತ ಸಂಘದ ಸಂಚಾಲಕ ಆದಿತ್ಯ ನಾರಾಯಣ್ ಕೊಲ್ಲಾಜೆ, ಕಾಂಗ್ರೇಸ್ ಪಕ್ಷದ ವಿವಿಧ ಘಟಕದ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!