ಹತ್ಯಡ್ಕ: ನಿವೃತ್ತ ಎ.ಎಸ್.ಐ ಕೆ.ಎಸ್. ಬಾಬು ನಿಧನ

Suddi Udaya

ಹತ್ಯಡ್ಕ :ಇಲ್ಲಿಯ ತುಂಬೆತಡ್ಕ ನಿವಾಸಿ ಕೆ.ಎಸ್. ಬಾಬು (73ವ.) ಇವರು ಅಲ್ಪಕಾಲದ ಅನಾರೋಗ್ಯದಿಂದ ನ.24 ರಂದು ನಿಧನರಾದರು.

ಇವರು ಉಪ್ಪಿನಂಗಡಿ, ಬಂಟ್ವಾಳ, ಬರ್ಕೆ, ಮೂಲ್ಕಿ, ಬೆಳ್ತಂಗಡಿ, ಧರ್ಮಸ್ಥಳ, ಉದನೆ ಠಾಣೆಗಳಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಎ.ಎಸ್.ಐ ಯಾಗಿ ನಿವೃತ್ತಿಹೊಂದಿದ್ದರು.

ಮೃತರು ಪತ್ನಿ ಯಶೋಧ, ಮೂವರು ಪುತ್ರರಾದ ಲವ ಕುಮಾರ್, ಶಶಿಕುಮಾರ್, ಕುಮಾರೇಶ ಹಾಗೂ ಇಬ್ಬರು ಪುತ್ರಿಯರಾದ ಶಾಲಿನಿ, ಶೈಲಜಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!