ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ: ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಕು| ಮಾನ್ವಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ : ಉರುವಾಲು ಶ್ರೀ ಭಾರತಿ ವಿದ್ಯಾ ಸಂಸ್ಥೆಯ 6ನೇ ತರಗತಿಯ ವಿದ್ಯಾರ್ಥಿ ಕು| ಮಾನ್ವಿರವರು ಹುಬ್ಬಳ್ಳಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಶೃಂಗೇರಿ ಕೊಪ್ಪ ಕರಾಟೆ ಸ್ಪರ್ಧೆ ಎರಡನೇ ಸ್ಥಾನ ಹಾಗೂ ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇವರು ಕರಾಟೆ ಪಟುವಾಗಿದ್ದು, ವಸಂತ ಕೆ ಬಂಗೇರ ಇವರ ವಿದ್ಯಾರ್ಥಿನಿಯಾಗಿದ್ದಾರೆ. ಪದ್ಮಂಜ ಗ್ರಾಮದ ಅಡೆಂಜ ರಾಜೇಶ್. ಎ ಜೈನ್ ಹಾಗೂ ಶ್ರೀಮತಿ ಮಾಲಿನಿ ಬಿ ಜೈನ್ ಇವರ ಪುತ್ರಿಯಾಗಿದ್ದಾರೆ.

Leave a Comment

error: Content is protected !!