22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚುನಾವಣೆತಾಲೂಕು ಸುದ್ದಿ

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ 100 ನೇ ಕಾರಿನ ಕೀ ಹಸ್ತಾಂತರ ಕಾರ್ಯಕ್ರಮ

ನಾರಾವಿ: ದ.ಕ ಜಿಲ್ಲೆಯ ಪ್ರತಿಷ್ಠಿತ ಮಾರುತಿ ಸುಝುಕಿ ಕಾರುಗಳ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್ಸ್ ಪ್ರೈ. ಲಿ. ಮಂಗಳೂರು ಇವರ ನೂತನ ಶಾಖೆ ನಾರಾವಿಯಲ್ಲಿ ನೂರನೇ ಕಾರಿನ ಕೀಲಿ ಹಸ್ತಾಂತರ ಕಾರ್ಯಕ್ರಮ ನ.24 ರಂದು ನಡೆಯಿತು.

ಈ ಸಂದರ್ಭದಲ್ಲಿ ನೂತನ ಕಾರಿನ ಕೀಲಿಯನ್ನು ಗ್ರಾಹಕರಾದ ಕರುಣಾಕರ ಜೈನ್ ನಾರಾವಿ,ಪದ್ಮಪ್ರಸಾದ್ ಜೈನ್ ನಾರಾವಿ, ಸುಬ್ರಹ್ಮಣ್ಯ ಭಟ್ ಪಣಕಾಜೆ, ಹಬೀಬ್ ಮುತ್ರಿಮಜಲು ರವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಉದ್ಯಮಿಗಳಾದ ರೋಶನ್ ಹೆಗ್ಡೆ, ಸುರೇಂದ್ರ ಕುಮಾರ್ ಹಾಗೂ ರವಿಕುಮಾರ್ ಅರಸಿಕಟ್ಟೆಉಪಸ್ಥಿತರಿದ್ದರು.

ಮಾಂಡೋವಿ ಮೋಟಾರ್ಸ್ ಮಂಗಳೂರು ರೂರಲ್ ಸೇಲ್ಸ್ ಮ್ಯಾನೇಜರ್ ಸುಜಿತ್ ಕಾರ್ಯಕ್ರಮ ನಿರೂಪಿಸಿ, ಎಜಿಎಂ Nexa ಸೇಲ್ಸ್ ಅಕ್ಷಯ್ ಕುಮಾರ್ ವಂದಿಸಿದರು.

ಈ ಸಂದರ್ಭದಲ್ಲಿ ಗಣೇಶ್ ಕುಲಾಲ್ (Works Manager)ನಾರಾವಿ, ಮಾಂಡೋವಿ ಮೋಟಾರ್ಸ್ ಕ್ಯಾಲಿಟಿ ಕೇರ್ ಮ್ಯಾನೇಜರ್ ಗಿರೀಶ್ ಎಲ್.ಪಿ, ಸೇಲ್ಸ್ ಆಫೀಸರ್ ಗಳಾದ ಕಿಶೋರ್ ಕುಮಾರ್, ಸುಹಾಸ್ ಜೈನ್, ಸುಮಂತ್ ರಾಜ್, ಲೋಕೇಶ್ ಉಪಸ್ಥಿತರಿದ್ದರು.

ಅತೀ ಕಡಿಮೆ ಸಮಯದಲ್ಲಿ ನಾರಾವಿ ಗ್ರಾಮೀಣ ಪ್ರದೇಶದಲ್ಲಿ ನೂರು ಕಾರುಗಳ ಮಾರಾಟಕ್ಕೆ ಸಹಕರಿಸಿದ ಎಲ್ಲಾ ನಾರಾವಿ ಪರಿಸರದ ಗ್ರಾಹಕರಿಗೆ ಮಾಂಡೋವಿ ಮೋಟಾರ್ಸ್ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

ಟೀಮ್ ಸೇಲ್ಸ್ ಮ್ಯಾನೇಜರ್ ಚರಣ್ ಕುಮಾರ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ , ಮಾಂಡೋವಿ ಮೋಟಾರ್ಸ್ಸ್ ಬಗ್ಗೆ ತಿಳಿಸಿದರು.

Related posts

ತೆಂಕಕಾರಂದೂರು ಗ್ರಾಮದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣ; ಆರೋಪಿಗಳ ಶೀಘ್ರ ಪತ್ತೆಗಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಶ್ಯಂತ್ ಅವರಿಗೆ ಮನವಿ

Suddi Udaya

ಲಾಯಿಲ: ಗಾಂಧಿನಗರದಲ್ಲಿ ರಸ್ತೆಕಾಮಗಾರಿ ಲೋಕಾರ್ಪಣೆ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶಾಂತಾ ಶೆಟ್ಟಿ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಬಳಂಜ: ಆನೆಪಿಲ ಚಂದ್ರಾವತಿಯಮ್ಮ ಅಸೌಖ್ಯದಿಂದ ನಿಧನ

Suddi Udaya

ಕೊಯ್ಯೂರು ಪಂಚದುರ್ಗ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ಭಾಜಪ ದ ನಿಷ್ಠಾವಂತ ಕಾರ್ಯಕರ್ತ ನಾರಾಯಣ ಆಚಾರ್ಯ ಗುರುವಾಯನಕೆರೆ ನಿಧನ

Suddi Udaya
error: Content is protected !!