ಅಂತರ್ ಕಾಲೇಜು ಚದುರಂಗ ಸ್ಪರ್ಧೆ: ಎಸ್ ಡಿಎಂ ಕಾಲೇಜಿನ ಪುರುಷರ ತಂಡ ಚಾಂಪಿಯನ್

Suddi Udaya

ಉಜಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾಕ್ಟರ್ ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಚದುರಂಗ ಸ್ಪರ್ಧೆಯಲ್ಲಿ ಎಸ್ ಡಿಎಂ ಕಾಲೇಜಿನ ಪುರುಷರ ತಂಡ ಚಾಂಪಿಯನ್ ಪಟ್ಟ ಮೂಡುಗೇರಿಸಿಕೊಂಡಿದೆ.

ಎಸ್ ಡಿ ಎಂ ನ ವಿದ್ಯಾರ್ಥಿಗಳಾದ ರಾಹುಲ್ ಜೈನ್, ಸುಪ್ರೀತ್ ಜೈನ್, ಸಂದೇಶ್, ಗೋಕುಲ್ ಕೃಷ್ಣ , ಹರಿಪ್ರಸಾದ್, ಶೇಕ್ ಮಹಮ್ಮದ್ ಇರ್ಫಾನ್ ಭಾಗವಹಿಸಿದ್ದು ಇವರಲ್ಲಿ ಶೇಕ್ ಮಹಮ್ಮದ್ ಇರ್ಫಾನ್, ರಾಹುಲ್ ಜೈನ್ , ಸುಪ್ರೀತ್ ಜೈನ್ , ಇವರು ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾನಿಲಯ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಶೇಕ್ ಮಹಮ್ಮದ್ ಇರ್ಫಾನ್ ತಂಡದ ನಾಯಕರಾಗಿ ಮುನ್ನಡೆಸಿದರು.
ಇವರನ್ನು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಬಿ .ಎ ಕುಮಾರ್ ಹೆಗ್ಡೆ ಅಭಿನಂದಿಸಿದರು.
ಇವರಿಗೆ ಎಸ್ ಡಿ ಎಂ ಸ್ಪೋರ್ಟ್ಸ್ ಕ್ಲಬ್ ನ , ಶಾರೀರಿಕ ವಿಭಾಗದ ವಿಭಾಗದ ಸಂದೇಶ ಸುದ್ದಿನ ಹಾಗೂ ಶಾರದ ಇವರು ತರಬೇತಿಯನ್ನು ನೀಡುತ್ತಾರೆ.

Leave a Comment

error: Content is protected !!