ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

Suddi Udaya

ಬೆಳ್ತಂಗಡಿ : ಮಡಂತ್ಯಾರು, ಬೆಳ್ತಂಗಡಿ ಸರ್ವಿಸ್ ಆಪೇ ಆಟೋ ರಿಕ್ಷಾ ದಲ್ಲಿ ಡಿ.07 ರಂದು ಮದ್ಯಾಹ್ನ 3.15 ಗಂಟೆ ಸಮಯ, ಗೇರುಕಟ್ಟೆ ಕುಲಾಯಿ ಮನೆ ವಸಂತಿ ಎಂಬವರ ರೂ.12000 ಮೊತ್ತದ ಪರ್ಸ್ ಬಿದ್ದಿತ್ತು. ಅವರು ಮನೆಗೆ ಹೋಗಿ ನೋಡಿದಾಗ ಪರ್ಸ್ ಆಟೋ ದಲ್ಲಿ ಬಿದ್ದಿರಬಹುದು ಎಂಬ ಸಂಶಯದಲ್ಲಿ ಕೂಡಲೇ ಗೇರುಕಟ್ಟೆ ಆಟೋ ಚಾಲಕರಾದ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರಿಗೆ ಮಾಹಿತಿ ನೀಡಿ ಅವರು ಸ್ನೇಹ ಸಂಗಮ ಆಟೋ ಚಾಲಕರ &ಮಾಲಕರ ಸಂಘದ ಕಾರ್ಯದರ್ಶಿ ಸಿದ್ದಿಕ್. ಜಿ ಎಚ್. ಅವರಿಗೆ ಮಾಹಿತಿ ಕೊಟ್ಟು ಕೂಡಲೇ ಮಡಂತ್ಯಾರ್ ಆಪೇ ಯೂನಿಯನ್ ಸದಸ್ಯರಿಗೆ ಮಾಹಿತಿ ಕೊಟ್ಟಿರುತ್ತಾರೆ.

ಇಂದು ಬೆಳಿಗ್ಗೆ ವಸಂತಿ ಅವರೊಂದಿಗೆ, ಆಟೋ ಚಾಲಕರಾದ ವಸಂತ ಶೆಟ್ಟಿ, ಸತೀಶ್ ಶೆಟ್ಟಿ, ಸಿದ್ದಿಕ್ ಅವರ ಆಟೋದಲ್ಲಿ ಮಡಂತ್ಯಾರು ಹೋಗಿ ಬಿ ಎಂ ಆಪೇ ಆಟೋ ಚಾಲಕರಾದ ಇರ್ಷಾದ್ ಕೊಲ್ಪದಬೈಲ್ ಪ್ರಾಮಾಣಿಕ ವಾಗಿ ಹಿಂದಿರುಗಿಸಿ ಕೊಟ್ಟು ಸಹಕರಿಸಿದರು.

Leave a Comment

error: Content is protected !!