32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಡಂತ್ಯಾರು: ಬಿದ್ದ ಪರ್ಸ್ ಹಿಂದುರುಗಿಸಿ ಕೊಟ್ಟು ಮಾನವೀಯತೆ ಮೆರೆದ ಆಟೋ ಚಾಲಕ ಇರ್ಷಾದ್

ಬೆಳ್ತಂಗಡಿ : ಮಡಂತ್ಯಾರು, ಬೆಳ್ತಂಗಡಿ ಸರ್ವಿಸ್ ಆಪೇ ಆಟೋ ರಿಕ್ಷಾ ದಲ್ಲಿ ಡಿ.07 ರಂದು ಮದ್ಯಾಹ್ನ 3.15 ಗಂಟೆ ಸಮಯ, ಗೇರುಕಟ್ಟೆ ಕುಲಾಯಿ ಮನೆ ವಸಂತಿ ಎಂಬವರ ರೂ.12000 ಮೊತ್ತದ ಪರ್ಸ್ ಬಿದ್ದಿತ್ತು. ಅವರು ಮನೆಗೆ ಹೋಗಿ ನೋಡಿದಾಗ ಪರ್ಸ್ ಆಟೋ ದಲ್ಲಿ ಬಿದ್ದಿರಬಹುದು ಎಂಬ ಸಂಶಯದಲ್ಲಿ ಕೂಡಲೇ ಗೇರುಕಟ್ಟೆ ಆಟೋ ಚಾಲಕರಾದ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರಿಗೆ ಮಾಹಿತಿ ನೀಡಿ ಅವರು ಸ್ನೇಹ ಸಂಗಮ ಆಟೋ ಚಾಲಕರ &ಮಾಲಕರ ಸಂಘದ ಕಾರ್ಯದರ್ಶಿ ಸಿದ್ದಿಕ್. ಜಿ ಎಚ್. ಅವರಿಗೆ ಮಾಹಿತಿ ಕೊಟ್ಟು ಕೂಡಲೇ ಮಡಂತ್ಯಾರ್ ಆಪೇ ಯೂನಿಯನ್ ಸದಸ್ಯರಿಗೆ ಮಾಹಿತಿ ಕೊಟ್ಟಿರುತ್ತಾರೆ.

ಇಂದು ಬೆಳಿಗ್ಗೆ ವಸಂತಿ ಅವರೊಂದಿಗೆ, ಆಟೋ ಚಾಲಕರಾದ ವಸಂತ ಶೆಟ್ಟಿ, ಸತೀಶ್ ಶೆಟ್ಟಿ, ಸಿದ್ದಿಕ್ ಅವರ ಆಟೋದಲ್ಲಿ ಮಡಂತ್ಯಾರು ಹೋಗಿ ಬಿ ಎಂ ಆಪೇ ಆಟೋ ಚಾಲಕರಾದ ಇರ್ಷಾದ್ ಕೊಲ್ಪದಬೈಲ್ ಪ್ರಾಮಾಣಿಕ ವಾಗಿ ಹಿಂದಿರುಗಿಸಿ ಕೊಟ್ಟು ಸಹಕರಿಸಿದರು.

Related posts

ಬಂಗಾಡಿ ಸಹಸ್ರ ನಾಗಬನದಲ್ಲಿ ಶ್ರೀ ಅಷ್ಟಪವಿತ್ರ ನಾಗಬ್ರಹ್ಮಲಿಂಗೇಶ್ವರ ದೇವರು ಮತ್ತು ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ

Suddi Udaya

ಲಾಯಿಲ: ಕಂಪ್ಯೂಟರ್ ತರಬೇತಿಯ ಸಮಾರೋಪ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕಾರಿಣಿ ಸಭೆ: ಮಾ.30 ರಂದು ಬಿಜೆಪಿ ಬೆಳ್ತಂಗಡಿ ಮಂಡಲ ಪದಾಧಿಕಾರಿಗಳ ಪದಗ್ರಹಣ

Suddi Udaya

ಬಂದಾರು: ಉಜ್ವಲ್ ಗ್ಯಾಸ್ ವಿತರಣೆ ಹಾಗೂ ಕೆವೈಸಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಾರ್ಯಕ್ರಮ

Suddi Udaya

ತಾಲೂಕು ಮಟ್ಟದ ಚೆಸ್ ಪಂದ್ಯಾಟ: ಬೆಳ್ತಂಗಡಿ ಎಸ್.ಡಿ .ಎಮ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಎಸ್ ಡಿ ಎಂ ಪ.ಪೂ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಸಂಸ್ಕೃತದಲ್ಲಿ ಪೂರ್ಣಾಂಕ

Suddi Udaya
error: Content is protected !!