ದಿಡುಪೆ ಮಸ್ಜಿದುಲ್ ಹಿದಾಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ಪುನರಾಯ್ಕೆ

Suddi Udaya

ಬೆಳ್ತಂಗಡಿ : ರಹ್ಮಾನಿಯಾ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಅಂಗಸಂಸ್ಥೆಯಾದ ಮಸ್ಜಿದುಲ್ ಹಿದಾಯ ಹಾಗೂ ಹಿದಾಯತುಲ್ ಇಸ್ಲಾಂ ಮದರಸ ದಿಡುಪೆ ಆಡಳಿತ ಸಮಿತಿ ಮಹಾಸಭೆಯು ಕಾಜೂರು ದರ್ಗಾ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು ಇವರ ಸಭಾಧ್ಯಕ್ಷತೆಯಲ್ಲಿ ದಿಡುಪೆ ಮದರಸ ಹಾಲ್ ನಲ್ಲಿ ನಡೆಯಿತು.


ಸ್ಥಳೀಯ ಇಮಾಂ ಶರೀಫ್ ಸಖಾಫಿ ಉಜಿರ್ಬೆಟ್ಟು ದುಆ ಹಾಗೂ ಉದ್ಘಾಟನೆ ಮಾಡಿದರು.
ಕಾಜೂರು ದರ್ಗಾ ಶರೀಫ್ ಆಡಳಿತ ಸಮಿತಿ ಪ್ರದಾನ ಕಾರ್ಯದರ್ಶಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಜೆ.ಎಚ್ ಅಬೂಬಕರ್ ಸಿದ್ದೀಕ್ ಕಾಜೂರು , ಕೋಶಾಧಿಕಾರಿ ಮುಹಮ್ಮದ್ ಕಮಾಲ್ ಕಾಜೂರು ಇವರ ಗೌರವ ಉಪಸ್ಥಿಯೊಂದಿಗೆ ನಡೆದ ಮಹಾಸಭೆಯಲ್ಲಿ ಹಿಂದಿನ ಸಮಿತಿಯ ಕಾರ್ಯ ವೈಕರ್ಯಗಳನ್ನು ಚರ್ಚಿಸಿ ಸಭೆಯ ಸರ್ವಾನುಮತದ ಅಭಿಪ್ರಾಯ ಮೇರೆಗೆ ಈ ಹಿಂದಿನ ಸಮಿತಿಯನ್ನೇ ಪುನರಾಯ್ಕೆ ಮಾಡಿದ ಪ್ರಕಾರ ಅಧ್ಯಕ್ಷರಾಗಿ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ, ಪ್ರಧಾನ ಕಾರ್ಯದರ್ಶಿಯಾಗಿ ಎ.ಯು ಮುಹಮ್ಮದ್ ಅಲಿ ಅಶ್ವತ್ತಡಿ, ಕೋಶಾಧಿಕಾರಿಯಾಗಿ ಎನ್ ಎ ಪುತ್ತಬ್ಬ ಅಡ್ಕ , ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಪಯ್ಯೆ , ಕಾರ್ಯದರ್ಶಿಯಾಗಿ ನಿಝಾಮುದ್ದೀನ್ ಅಜಲ್ದಕ್ಕಿ ಸಹಿತ ವಿರುವ 11 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರು ವಂದಿಸಿದರು.

Leave a Comment

error: Content is protected !!