ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

ಗೇರುಕಟ್ಟೆ : ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಾಮಪತ್ರ ಸಲ್ಲಿಕೆ ಡಿ.11 ರಂದು ಸಂಘದ ಕಛೇರಿಯಲ್ಲಿ ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ.ವಿ ರವರಿಗೆ ಸಲ್ಲಿಸಿದರು. ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಡಿ.19 ರಂದು ಸಹಕಾರ ಸಂಘಗಳ ಉಪನಿಬಂಧಕರ ಅಧಿಸೂಚನೆಯಂತೆ ನಡೆಯಲಿದೆ.

ಕಾಂಗ್ರೆಸ್ ಬೆಂಬಲಿತ ಸಾಲಗಾರ ಸಾಮಾನ್ಯಾ ಕ್ಷೇತ್ರದಿಂದ ಪ್ರಕಾಶ್ ರಮೇಶಗೌಡ, ನೀನಾ ಕುಮಾರ್, ನೇವಿಲ್ ಮೊರಸ್., ಸಾಂತಪ್ಪ ಶೆಟ್ಟಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಲಕ್ಷ್ಮಣ್ ನಾಯ್ಕ, ಸಾಲಗಾರ ಪರಿಶಿಷ್ಟ ಕ್ಷೇತ್ರದಿಂದ ಕೇಶವತಿ , ಸಾಲಗಾರ ಹಿಂದುಳಿದ ವರ್ಗ- ಪ್ರವರ್ಗ ಎ -1, ಕೇಶವ ಪೂಜಾರಿ ನಾಳ, ಸಾಲಗಾರ ಹಿಂದುಳಿದ ವರ್ಗ- ಪ್ರವರ್ಗ ಬಿ- 1, ಸ್ಥಾನದಿಂದ ಮರಿಟಾ ಪಿಂಟೊ, ಸಾಲಗಾರ ಮಹಿಳಾ ಮೀಸಲು – ಕ್ಷೇತ್ರದಿಂದ ಪೌಲಿನ್ ರೆಗೋ, ರೀತಾ.ಪಿ ಹಾಗೂ ಸಾಲಗಾರರಲ್ಲದ ಕ್ಷೇತ್ರ ದಿಂದ ಹರೀಶ್ ಕೆರೆ ಕೋಡಿ. ಮತ್ತು ಹರೀಶ್ ಕುಮಾರ್ , ಒಟ್ಟು 12 ಮಂದಿ ಡಿ.7ರಂದು ನಾಮಮಾತ್ರ ಸಲ್ಲಿಸಿದರು.

Leave a Comment

error: Content is protected !!