25.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿ

ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಗಳು- ಮಹಿಳೆಗೆ ರೂ. 20. 29 ಲಕ್ಷಕ್ಕೂ ಮಿಕ್ಕಿ ವಂಚನೆ

ಬೆಳ್ತಂಗಡಿ: ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿಗಳು ಅದಕ್ಕಾಗಿ ಟಲಿಗ್ರಾಂ ಆಫ್ ನ್ನು ಡೌನ್‌ಲೋಡ್‌ ಮಾಡುವಂತೆ ತಿಳಿಸಿ ಲಿಂಕ್‌ ಇರುವ ಮೆಸೇಜ್‌ ಒಂದನ್ನು ಕಳುಹಿಸಿಕೊಟ್ಟಿದ್ದನ್ನು ಓಪನ್ ಮಾಡಿ , ವ್ಯವಹಾರ ಮಾಡಿ ರೂ.20.29 ಲಕ್ಷ ರೂ. ವಂಚಿಸಿದ‌ ಪ್ರಕರಣ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಕುಕ್ಕಿಪ್ಪಾಡಿ ಗ್ರಾಮದ ವೀಟಾ ಮರೀನಾ ಡಿಸೋಜಾ ಬಿನ್ ಜೋನ್‌ ಸಂತೋಷ್‌ ಡಿಸೋಜ ವಂಚನೆಗೆ ಒಳಗಾಗಿ ಹಣ ಕಳೆದು ಕೊಂಡವರು. ಡಿ.8ರಂದು ಬೆಳಿಗ್ಗೆ ವೀಟಾ ಮರೀನಾ ಇವರ ವಾಟ್ಸ್ ಗೆ ಮೊಬೈಲ್ 9044759336ರಿಂದ ಯಾರೋ ಅಪರಿಚಿತ ವ್ಯಕ್ತಿಗಳು ನಿಮ್ಮ ಹಣವನ್ನು ದ್ವಿಗುಣ ಮಾಡಿ ಕೊಡುವುದಾಗಿ ತಿಳಿಸಿ ಅದಕ್ಕಾಗಿ ಟೆಲಿಗ್ರಾಂ ಆಫ್ ಡೌನ್ ಲೋಡ್ ಮಾಡುವಂತೆ ತಿಳಿಸಿ ಲಿಂಕ್ ಇರುವ ಮೆಸೇಜ್ ಒಂದನ್ನು ಕಳುಹಿಸಿ ಕೊಟ್ಟಿದ್ದರು.

ಟೆಲಿಗ್ರಾಂ ಆಪ್‌ ಡೌನ್‌ಲೋಡ್‌ ಮಾಡಿ ಅವರು ಕೊಟ್ಟಂತಹ ಲಿಂಕ್‌ ಮುಖೇನ ಅವರೊಂದಿಗೆ ವ್ಯವಹರಿಸಿದಾಗ ಡಿ. 8 ರಿಂದ ಡಿ.11 ರವರೆಗೆ ಕರ್ನಾಟಕ ಬ್ಯಾಂಕ್‌ ಖಾತೆ ನಂಬ್ರ 4742500101612801 ನೇದಕ್ಕೆ ಹಂತ ಹಂತವಾಗಿ ಒಟ್ಟು 10,403/- ರೂ ಹಣವನ್ಜು ಹಾಕಿದ್ದರು. ಇದರಿಂದ ಅಪರಿಚಿತ ವ್ಯಕ್ತಿಯ ಮೇಲೆ ನಂಬಿಕೆ ಬಂದು ಅವರು ಹೇಳಿದಂತೆ ಹಣ ದ್ವಿಗುಣ ಮಾಡುವ ಬಗ್ಗೆ ಡಿ.12 ರಂದು ಅವರು ನೀಡಿದಂತಹ UPI transaction ID ನಂಬ್ರ 334651862892 ನೇದಕ್ಕೆ ರೂ 50,000, ಡಿ.13 ರಂದು UPI transaction ID 334711784526 ನೇದಕ್ಕೆ ರೂ 30,000 ಹಾಗೂ ಅದೇ ದಿನ UPI transaction ID 371321985478 ನೇದಕ್ಕೆ ರೂ.27,100 ಹಣ ಹಾಕಿದ್ದರು.ಬಳಿಕ ತಾನು ಹಾಕಿದ ಹಣವನ್ನು ದ್ವಿಗುಣ ಮಾಡಿಕೊಡುವಂತೆ ವೀಟಾ ಮರೀನಾ ಕೇಳಿಕೊಂಡಾಗ ಆರೋಪಿಗಳು ಇನ್ನೂ ಇದೇ ರೀತಿ ಮೂರು ಟಾಸ್ಕ್‌ ನಿಂದ ಹಣ ಬರಲು ಬಾಕಿ ಇದೆ ಅದರ ನಂತರ ನಿಮಗೆ ಹಣ ಹಾಕುವುದಾಗಿ ತಿಳಿಸಿದ್ದರು.

ನಂತರ ಡಿ.14 ರಂದು ಮತ್ತೆ ವೀಟಾ ಅವರು ಹಣದ ಬಗ್ಗೆ ವಿಚಾರಿಸಿದಾಗ ಆರೋಪಿಗಳು ನೀವು ಹಾಕಿದ ಹಣದ ಮೊತ್ತ ಕಡಿಮೆ ಇದ್ದು, ಹೆಚ್ಚಿನ ಮೊತ್ತದ ಹಣ ಹಾಕುವಂತೆ ತಿಳಿಸಿದಾಗ ವೀಟಾ ಮರೀನಾ ಅವರು ತನ್ನ ಚಿನ್ನದ ಒಡವೆಗಳನ್ನು ಅಡವಿರಿಸಿ ವಾಮದಪದವು ವಿಜಯ ಕೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ ಬ್ಯಾಂಕಿನಿಂದಾಗಿ ಕೆನರಾ ಬ್ಯಾಂಕ್‌ ಮೂಲಕ ಆರೋಪಿಗಳ MAHALAXMI CONSULTANCY ಎಂಬ ಹೆಸರಿನ ಅಕೌಂಟ್‌ ನಂಬ್ರ: 4609002100020213 ನೇದಕ್ಕೆ ರೂ 3,00,000 ಹಾಕಿದ್ದು, ಈ ಸಮಯ ಆರೋಪಿಗಳು ನಿಮ್ಮ ಟಾಸ್ಕ್‌ ಇವೆಂಟ್‌ ಮುಗಿಯಲಿಲ್ಲ.

ನೀವು ಮತ್ತೆ ದೊಡ್ಡ ಮೊತ್ತದ ಹಣ ಹಾಕಬೇಕು ನೀವು ಹಾಕಿದ ಎಲ್ಲಾ ಹಣ ಒಟ್ಟಾಗಿ ದ್ವಿಗುಣವಾಗಿ ನಿಮಗೆ ಸಿಗಲಿದೆ ಎಂದು ತಿಳಿಸಿ ವೀಟಾ ಮರೀನಾ ಅವರನ್ನು ನಂಬಿಸಿದ್ದು ನಂತರ ಅವರು ತನ್ನ ಗಂಡನ, ಅಕ್ಕನ ಮತ್ತು ಗೆಳತಿಯ ಒಡವೆಗಳನ್ನು ಅವರಿಗೆ ವಿಚಾರ ತಿಳಿಸದೆ ಅಡವಿಟ್ಟು ಡಿ.15 ರಂದು ವಾಮದಪದವು ಬ್ಯಾಂಕಿನಿಂದ SAHANI PROPERTY DEALER ಎಂಬ ಹೆಸರಿನ ಅಕೌಂಟು ಸಂಖ್ಯೆ : 333905001619 ನೇದಕ್ಕೆ 5,72,000(ಐದು ಲಕ್ಷದ ಎಪ್ಪತ್ತೆರಡು ಸಾವಿರ) ಹಣ ಹಾಗೂ ಡಿ. 19 ರಂದು ವಾಮದಪದವು ಬ್ಯಾಂಕಿನಿಂದ ATIK HAJIBHAI AGWAN ಎಂಬ ಹೆಸರಿನ ಅಕೌಂಟು ನಂಬ್ರ 2211214242897691 ನೇದಕ್ಕೆ 4,00,000 ರೂ ಹಣ ಹಾಗೂ ಡಿ.20 ರಂದು ವಾಮದಪದವು ಬ್ಯಾಂಕಿನಿಂದ COUNTRY CARGO PACKERS AND MOV ಎಂಬ ಹೆಸರಿನ ಅಕೌಂಟು ನಂಬ್ರ 002105027715 ನೇದಕ್ಕೆ 2.00,000 ರೂ ಹಣ ಹಾಗೂ ಡಿ.22 ರಂದು PANDA ASHOK KUMAR DORA ನೇದರ ಅಕೌಂಟು ಸಂಖ್ಯೆ 438001502322 ನೇದಕ್ಕೆ 4,50,000 ರೂ ಹಣ ಹಾಕಿದರೂ ಹಣ ದ್ವಿಗುಣ ಮಾಡಿಕೊಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲದನ್ನು ಗಮನಿಸಿ ಮೋಸ ಹೋದ ವಿಚಾರವನ್ನು ಗಂಡನಿಗೆ ತಿಳಿಸಿ ಈ ಬಗ್ಗೆ ವೀಟಾ ಮರೀನಾ ಡಿಸೋಜ ಪುಂಜಾಲಕಟ್ಟೆ ಠಾಣೆಗೆ ಡಿ.23ರಂದು ದೂರು ನೀಡಿದ್ದಾರೆ.‌

ಪುಂಜಾಲಕಟ್ಟೆ ಠಾಣಾ ಅ.ಕ್ರ 113/2023 ಕಲಂ: 66(C), 66(D), 417, 420 IPCಯಂತೆ ಪ್ರಕರಣ ದಾಖಲಾಗಿದೆ.

Related posts

ಧರ್ಮಸ್ಥಳ: ಮಗನನ್ನು ರಕ್ಷಿಸಲು ಹೋಗಿ ತಂದೆ ನೀರುಪಾಲು

Suddi Udaya

ಸವಣಾಲಿನಲ್ಲಿ ಬೈಕ್- ಬೈಕ್ ನಡುವೆ ಅಪಘಾತ : ಆಳದಂಗಡಿ ಹಾ.ಉ.ಸ.ಸಂಘದ ಮಾಜಿ ಕಾರ್ಯದರ್ಶಿ ಹೆನ್ರಿ ಡಿ’ ಸೋಜ ಮೃತ್ಯು

Suddi Udaya

ಕಾರಿನಲ್ಲಿ ಬಂದು ಭಾಸ್ಕರ ನಾಯ್ಕ ಹಾಗೂ ಅವರ ಪತ್ನಿಗೆ ಹಲ್ಲೆ ನಡೆಸಿದ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲು

Suddi Udaya

ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಓ.ಟಿ.ಪಿ. ಪಡೆದು ಕೊಕ್ಕಡದ ಮಹಿಳೆಗೆ ರೂ.1.50ಲಕ್ಷ. ವಂಚನೆ

Suddi Udaya

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ಬಳಂಜ: ತಾಯಿ-ಮಗನಿಗೆ ಜೀವ ಬೆದರಿಕೆ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!