ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೇರಿಮಾರು ಪ್ರ. ಕಾರ್ಯದರ್ಶಿಯಾಗಿ ಕೆ. ಬಾಲಕೃಷ್ಣ ಗೌಡ ಕಲ್ಲಾಜೆ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಕೇರಿಮಾರು ಅವರು ಅವಿರೋಧವಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಾಲಕೃಷ್ಣ ಗೌಡ ಕಲ್ಲಾಜೆ, ಜತೆ ಕಾರ್ಯದರ್ಶಿಯಾಗಿ ಭರತ್ ಗೌಡ ಅಣಿಬೆಟ್ಟು, ಕೋಶಾಧಿಕಾರಿಯಾಗಿ ರಾಘವೇಂದ್ರ ಗೌಡ ಪೊದುಂಬಿಲ, ಉಪಾಧ್ಯಕ್ಷರಾಗಿ ಸುರೇಶ್ ಗೌಡ ಕೂಡಿಗೆ, ಶಿವರಾಮ ಗೌಡ ಎಸ್.ಪಿ., ವಾಮನ ಗೌಡ ಕೊಯಮಜಲು, ಗಂಗಾಧರ ಗೌಡ ಕಳೆಂಜ, ಪ್ರಭಾಕರ ಗೌಡ ಬೊಳ್ಮ, ಶ್ರೀನಿವಾಸ ಗೌಡ ಮಧುರ, ಜನಾರ್ದನ ಗೌಡ ಕುರ್ಕಿಲ್, ಬಾಲಕೃಷ್ಣ ಗೌಡ ಪಾರ, ವಾರಿಜಾ ಸುಂದರ ಗೌಡ ಇಚ್ಚಿಲ, ಸಂಘಟನಾ ಕಾರ್ಯದರ್ಶಿಗಳಾಗಿ, ಹರೀಶ್ ಗೌಡ ಮರಕಡ, ವಿಷ್ಣುಮೂರ್ತಿ ಗೌಡ ಬೆಳ್ಳೂರು, ಯೋಗೀಶ್ ಗೌಡ ಶಿಬಾಜೆ, ಪ್ರಮೋದ್ ಗೌಡ ಅಲೆಕ್ಕಿ ಲಕ್ಷ್ಮಣ ಗೌಡ ಹೆಬ್ಬರಜಾಲ್, ದೇವಿಪ್ರಸಾದ್ ಬೊಳ್ಳ ಗುರುರಾಜ್ ಅಂತರ ಸೇರಿದಂತೆ ಇತರರು ಗೌರವ ಸಲಹೆಗಾರರ ಸಹಿತ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Leave a Comment

error: Content is protected !!