ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಯೋಧ್ಯೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

Suddi Udaya

ಧರ್ಮಸ್ಥಳ: ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರರ ಭವ್ಯ ಮಂದಿರ ಉದ್ಘಾಟನೆಯ ನಿಮಿತ್ತವಾಗಿ ಇಡೀ ದೇಶದಾದ್ಯಂತ ಶ್ರೀ ರಾಮ ಪವಿತ್ರ ಮಂತ್ರಾಕ್ಷತೆ ವಿತರಣೆಯ ಅಭಿಯಾನ ನಡೆಯುತ್ತಿದೆ.
ಜ.1 ರಿಂದ ಈ ಅಭಿಯಾನ ಪ್ರಾರಂಭಗೊಂಡಿದ್ದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮಂತ್ರಾಕ್ಷತೆ ವಿತರಿಸಲಾಗಿದೆ.


ಧರ್ಮಸ್ಥಳ ಗ್ರಾಮದಲ್ಲಿ ಪ್ರಥಮವಾಗಿ ಹೆಗ್ಗಡೆಯವರ ನಿವಾಸದಿಂದ ಅಭಿಯಾನವನ್ನು ಪ್ರಾರಂಭಿಸಲಾಗಿದೆ.


ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತಿನ ಭಾಸ್ಕರ್ ಧರ್ಮಸ್ಥಳ, ಗ್ರಾಮದ ಅಭಿಯಾನ ಪ್ರಮುಖರಾದ ಶ್ರೀನಿವಾಸ ರಾವ್,ರಾಮಚಂದ್ರ ಭಟ್, ಸಂದೀಪ್ ರೈ, ರಾಷ್ಟ್ರೀಯ ಸ್ವಯಸೇವಕ ಸಂಘದ ಪೃಥ್ವಿಶ್ ಧರ್ಮಸ್ಥಳ, ಮಹಿಳಾ ಪ್ರಮುಖರಾದ ಶ್ರೀಮತಿ ಶಾಂಭವಿ ರೈ ಹಾಗೂ ಧನಲಕ್ಷ್ಮಿ ಜನಾರ್ಧನ್ ಉಪಸ್ಥಿತರಿದ್ದರು.

Leave a Comment

error: Content is protected !!