ಜ.5ರಂದು ಕೋರ್ಟುಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ನ್ಯಾಯಾಲಯ ಆದೇಶ

Suddi Udaya

ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೈಕೋರ್ಟು ಮತ್ತೆ ಗರಂ ಆಗಿದೆ. ನ್ಯಾಯಾಂಗ ನಿಂದನೆ ಹೈಕೋರ್ಟ್ ಅರ್ಜಿ ನಂಬ್ರ: ಸಿ.ಸಿ.ಸಿ 304/2020 ಸಂಬಂಧಿಸಿದಂತೆ ಆದೇಶ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಅವ್ಯಾಚ್ಯವಾಗಿ ನಿಂದಿಸಿದ ಮಹೇಶ್ ಶೆಟ್ಟಿ ತಿಮರೋಡಿಯವರ ನಡತೆ ಬಗ್ಗೆ ಅವರ ಪರ ವಕೀಲರು ತಿಮರೋಡಿ ಆ ರೀತಿ ಹೇಳಿಕೆ ನೀಡಿದ್ದು, ಸರಿಯಲ್ಲ ಮತ್ತು ಈ ಬಗ್ಗೆ ಅವರಿಗೆ ಇನ್ನು ಈ ರೀತಿ ಮಾಡದಂತೆ ತಿಳಿಸುವುದಾಗಿ ಹೇಳಿದರು.


ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಅವರು ಪತ್ನಿ ಸಹಿತ ಖುದ್ಧು ನ್ಯಾಯಾಲಯದ ಮುಂದೆ ಇದೇ ಜ. 5 ರಂದು ಹಾಜರಾಗುವಂತೆ ನ್ಯಾಯ ಪೀಠ ಆದೇಶಿಸಿದೆ.
ದೂರುದಾರರ ಪರವಾಗಿ ಖ್ಯಾತ ಹಿರಿಯ ನ್ಯಾಯವಾದಿಗಳಾದ ಚಂದ್ರನಾಥ ಆರಿಗ ಅವರು ವಾದಿಸಿದರು.

Leave a Comment

error: Content is protected !!