ಲಾಯಿಲ : ಡಿಸೇಲ್ ಇಲ್ಲದೆ ಕೈಕೊಟ್ಟ ಕೆಎಸ್ಸಾರ್ಟಿಸಿ ಬಸ್: ಸಂದಿಗ್ಧ ಸ್ಥಿತಿಯಲ್ಲಿ ಪ್ರಯಾಣಿಕರು

Suddi Udaya

ಬೆಳ್ತಂಗಡಿ: ಇಲ್ಲಿಯ ಲಾಯಿಲ ಜಂಕ್ಷನ್ ನಲ್ಲಿ ಡಿಸೇಲ್ ಇಲ್ಲದೆ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರಿಗೆ ಕೈಕೊಟ್ಟ ಘಟನೆ ನಡೆದಿದೆ.

ಧಮ೯ಸ್ಥಳದಿಂದ ಹೊರಟ ಈ ಬಸ್ ಲಾಯಿಲ ಜಂಕ್ಷನ್ ಬರುವ ಸಂದರ್ಭದಲ್ಲಿ ಡೀಸೆಲ್ ಖಾಲಿಯಾಗಿ ನಿಂತಿತ್ತೇನ್ನಲಾಗಿದೆ.‌ ಬಸ್ ನಲ್ಲಿ ಅನೇಕ ಪ್ರಯಾಣಿಕರು ಮಂಗಳೂರು ಗೆ ಹೋಗುವವರಿದ್ದು, ಅವರಿಗೆ ಸಮಸ್ಯೆ ಆಗಿದೆ. ಈ ಬಗ್ಗೆ ಡಿಫೋಗೆ ಕರೆಮಾಡಿ ಕೇಳಿದರೆ ಬಸ್ ಚಾಲಕ ಹತ್ತಿರದ ಪೆಟ್ರೋಲ್ ಬಂಕ್ ನಲ್ಲಿ ಡಿಸೇಲ್ ಹಾಕಿ ಹೋಗಬೇಕು ಎಂದು ಹೇಳುತ್ತಾರೆ, ಆದರೆ ಚಾಲಕ ನಾನು ಯಾಕೆ ಹಾಕಿಸಬೇಕು ಡಿಸೇಲ್ ಡಿಪೋ ದಲ್ಲೇ ಹಾಕಬೇಕು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಪ್ರಯಾಣಿಕರು ಸಂದಿಗ್ಧತೆ ಗೆ ಸಿಲುಕಿದ್ದಾರೆ.

Leave a Comment

error: Content is protected !!