22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಸಮಾಜ ಸೇವಕ ಚಾರ್ಮಾಡಿ ಹಸನಬ್ಬರವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಸೇವೆಯ ಅಂಬುಲೆನ್ಸ್ ಜಿಲ್ಲಾ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆ

ಬೆಳ್ತಂಗಡಿ: 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಹಾಜಿ ಹಸನಬ್ಬ ಚಾರ್ಮಾಡಿಯವರ ಕುಟುಂಬದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂಬುಲೆನ್ಸ್ ಸೇವೆಯನ್ನು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರು ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿದರು.

ಹಸನಬ್ಬ ರವರಿಗೆ ಪ್ರಶಸ್ತಿ ಜೊತೆಗೆ ಸರಕಾರದಿಂದ ಸಿಕ್ಕಿದ ಗೌರವ ಧನ 5 ಲಕ್ಷಕ್ಕೆ 3 ಲಕ್ಷ ರೂಪಾಯಿ ಟ್ರಸ್ಟ್ ನಿಂದ ಸೇರಿಸಿ ಸಾರ್ವಜನಿಕರ ತುರ್ತು ಉಚಿತ ಸೇವೆಗೆ ಈ ಅಂಬುಲೆನ್ಸ್ ನ್ನು ಒದಗಿಸಿದರು. ಈ ಸೇವೆಯನ್ನು ಗುರುತಿಸಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ತಮ್ಮ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಟ್ರಸ್ಟ್ ಗೆ ನೀಡಿದರು.

ಕಾರ್ಯಕ್ರಮದಲ್ಲಿ ಎಲ್.ಎಲ್. ಸಿ ಗಳಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು, ಜಿ .ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು , ಶಿವಪ್ರಸಾದ್ ಅಜಿಲ, ಯು.ಕೆ. ಮೋನು ಹಾಜಿ ಕಣಚೂರು, ರಕ್ಷಿತ್ ಶಿವರಾಮ್ ಬೆಳ್ತಂಗಡಿ, ಶಾಹುಲ್ ಹಮೀದ್ ಕೆ.ಕೆ, ಮಹಮ್ಮದ್ ಬಪ್ಪಳಿಗೆ, ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

Related posts

ಆಗಸ್ಟ್ 2 , 3: ಉಜಿರೆಯಲ್ಲಿ “ಮಹಿಳಾ ಯಕ್ಷ ಸಂಭ್ರಮ” : ಪತ್ರಿಕಾಗೋಷ್ಠಿ

Suddi Udaya

ಬೆಳ್ತಂಗಡಿ: ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ಎ.28: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನೆ

Suddi Udaya

ಬಂದಾರು: ತೀರ ಹದಗೆಟ್ಟ ರಸ್ತೆ; ದುರಸ್ತಿಗೊಳಿಸುವಂತೆ ಸ್ಥಳೀಯರ ಮನವಿ

Suddi Udaya

ಉಜಿರೆಯಿಂದ ಸೋಮಂತಡ್ಕ ಪ್ರಯಾಣ ಸಂದರ್ಭ ಕಳೆದು ಹೋದ ರೂ.2. 80 ಲಕ್ಷ ಹಣವಿದ್ದ ಬ್ಯಾಗ್: ಕೊರಗಜ್ಜನ ಮೊರೆ ಹೋದ ಬ್ಯಾಗ್ ಕಳೆದು ಕೊಂಡ‌ ಲತೇಶ್ ಉಜಿರೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಮಕ್ಕಳ ಸುರಕ್ಷತೆ ಹಾಗೂ ಶಿಕ್ಷಕರ ಜವಾಬ್ದಾರಿಯ ಬಗ್ಗೆ ಮಾಹಿತಿ ಕಾರ್ಯಗಾರ

Suddi Udaya
error: Content is protected !!