
ಶಿರ್ಲಾಲು : ಜ.29ರಿಂದ ಫೆ.2 ರವರೆಗೆ ನಡೆಯಲಿರುವ ಬದ್ಯಾರು ಕ್ಷೇತ್ರದ ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆಯು ಜ.14 ರಂದು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸೂರ್ಯನಾರಾಯಣ ರಾವ್ ಆಡಳಿತ ಮೊಕ್ತೇಸರರಾದ ಶ್ರೀಧರ್ ಪೂಜಾರಿ, ಆಡಳಿತ ಮಂಡಳಿಯ ಸದಸ್ಯರಾದ ಸಂಜೀವ ಪೂಜಾರಿ ಕೊಡಂಗೆ, ಪ್ರಭಾಕರ ಮುಡ್ಜಲೂ, ಆನಂದ ಎಸ್ ಎನ್, ಪ್ರಸಾದ್ ಎಮ್.ಕೆ ಕೋರ್ದೊಟ್ಟು, ಭಜನಾ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ್ ಕುಲಾಲ್ ಬೈರೊಟ್ಟು, ಕಾರ್ಯದರ್ಶಿಯಾದ ಸದಾಶಿವ ಶಿವಗಿರಿ, ಶ್ರೀದೇವಿ ಮಹಿಳಾ ಕೇಂದ್ರದ ಅಧ್ಯಕ್ಷರಾದ ವಿಜಯ ಶೇಖರ, ಭಜನಾ ಮಂಡಳಿಯ ಮಾಜಿ ಅಧ್ಯಕ್ಷರಾದ ಪ್ರಭಾಕರ ನಾಯ್ಕ, ಪ್ರಸಾದ್, ಪ್ರಶಾಂತ, ರಾಜೇಶ್ ಬೈರೊಟ್ಟು ಹಾಗೂ ಎಲ್ಲಾ ಸದಸ್ಯರು, ಊರಿನವರು ಉಪಸ್ಥಿತರಿದ್ದರು











