ಪದ್ಮುಂಜ: ನೀಲಯ ನಲ್ಕೆ ನಿಧನ

Suddi Udaya

ಬೆಳ್ತಂಗಡಿ: ಸಿಪಿಐಎಂ ತಾಲೂಕು ಸಮಿತಿ ಸದಸ್ಯೆ, ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿ, ದಲಿತ ಹಕ್ಕು ಸಮಿತಿಯ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಆಗಿರುವ ಶ್ರೀಮತಿ ಈಶ್ವರಿ ಶಂಕರ್ ಅವರ ತಂದೆ ನೀಲಯ ನಲ್ಕೆ ( 70 ವರ್ಷ ) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.


ಅವರ ಪತ್ನಿ ಶ್ರೀಮತಿ ಲಲಿತ ಈ ಹಿಂದೆಯೇ ಅಗಲಿರುತ್ತಾರೆ. ಮೃತರು ಪುತ್ರಿಯರಾದ ಪ್ರೇಮ, ಈಶ್ವರಿ, ಕವಿತ, ನಮಿತ, ವನಿತ ಹಾಗೂ ಪುತ್ರರಾದ ಕೇಶವ ಮತ್ತು ಅನಂತ ಕೃಷ್ಣ ಅವರನ್ನು , ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಬಂಧು-ಮಿತ್ರರನ್ನೂ ಅಗಲಿದ್ದಾರೆ. ಮೃತರು ಪದ್ಮುಂಜದ ವೆಂಕಪ್ಪ ಪಂಡಿತರ ಸಹೋದರ ರಾಗಿದ್ದಾರೆ.
ನೀಲಯ ನಲ್ಕೆ ನಿಧನಕ್ಕೆ ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತ ಶ್ರದ್ದಾಂಜಲಿ ಸಲ್ಲಿಸುತ್ತದೆ ಎಂದು ಬಿ.ಎಂ‌.ಭಟ್ ತಿಳಿಸಿದ್ದಾರೆ.

Leave a Comment

error: Content is protected !!