30.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ: ಟೆಲಿಗ್ರಾಮ್ ಆಪ್ ಮೂಲಕ ಹಣ ವರ್ಗಾಹಿಸಿ ಮೋಸ: ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ ರಿಗೆ ರೂ. 3.46 ಲಕ್ಷ ವಂಚನೆ

ಬೆಳ್ತಂಗಡಿ: ಟೆಲಿಗ್ರಾಮ್ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಅಪರಿಚಿತ ಖಾತೆಗೆ ಕಮೀಷನ್ ಪಡೆಯುವ ಉದ್ದೇಶದಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ 3,46,799/- ಹಣವನ್ನು ವರ್ಗಾಯಿಸಿದ್ದು, ಅಪರಿಚಿತ ಆರೋಪಿಗಳು ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು, ಯಾವುದೇ ಕಮೀಷನ್ ನೀಡದೇ ಹಾಗೂ ವರ್ಗಾಯಿಸಿಕೊಂಡ ಹಣವನ್ನೂ ಹಿಂತಿರುಗಿಸದೇ ವಂಚಿಸಿರುವ ಘಟನೆ ಜ.15 ರಂದು ನಡೆದಿದೆ.

ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ (26) ಎಂಬವರ ದೂರಿನಂತೆ, ಜ. 04 ರಂದು ಟೆಲಿಗ್ರಾಮ್ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಕಮೀಷನ್ ಪಡೆಯುವಂತೆ ಲಿಂಕ್ ಮತ್ತು ಮೇಸೆಜ್ ಬಂದಿರುತ್ತದೆ. ಅದರಂತೆ ಸುರೇಶ್ ರವರು ತಮ್ಮ ಬಾಬ್ತು ಖಾತೆ ವಿವರ ಮತ್ತು ಮೊಬೈಲ್ ನಂಬ್ರಗಳನ್ನು ನೀಡಿರುತ್ತಾರೆ. ಬಳಿಕ ಜ. 04 ರಿಂದ ಜ. 15 ರ ವರೆಗೆ ಒಟ್ಟು ರೂ 3,46,799/- ರೂ ಹಣವನ್ನು ಅಪರಿಚಿತ ಖಾತೆಗೆ ಕಮೀಷನ್ ಪಡೆಯುವ ಉದ್ದೇಶದಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು, ಅಪರಿಚಿತ ಆರೋಪಿಗಳು ಪಿರ್ಯಾದಿದಾರರ ಬಾಬ್ತು ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು, ಯಾವುದೇ ಕಮೀಷನ್ ನೀಡದೇ ಹಾಗೂ ವರ್ಗಾಯಿಸಿಕೊಂಡ ಹಣವನ್ನೂ ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 02/2024 ಕಲಂ;419,420 IPC , & 66(D) IT Act ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ತೆಕ್ಕಾರು ಬ್ರಹ್ಮಕಲಶೋತ್ಸವದಲ್ಲಿ ಶಾಸಕ ಹರೀಶ್ ಪೂಂಜರವರು ಮುಸ್ಲಿಂರನ್ನು ನಿಂದಿಸಿರುವುದು ಸಮುದಾಯಕ್ಕೆ ನೋವು ತಂದಿದೆ: ಮುಸ್ಲಿಂ ಮುಖಂಡರಿಂದ ಪತ್ರಿಕಾಗೋಷ್ಠಿ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಉಜಿರೆ: ಶ್ರೀ. ಧ. ಮಂ. ಪ.ಪೂ. ಕಾಲೇಜಿನ ಸಂಸ್ಕೃತ ವಿಭಾಗದ ” ಸುಬೋಧಿನಿ ” ಡಿಜಿಟಲ್ ಭಿತ್ತಿಪತ್ರಿಕೆ ಬಿಡುಗಡೆ

Suddi Udaya

ಫೆ.14: ಧರ್ಮಸ್ಥಳ ಕಲ್ಲೇರಿಯಲ್ಲಿ ನೂತನ ಸುನಿಲ್ ರೆಡಿವೇರ್ಸ್ ಶುಭಾರಂಭ

Suddi Udaya

ಲಾಯಿಲ ಪ್ರಸನ್ನ ಫಾರ್ಮಸಿ ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya

ಕೋಟದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರಿಗೆ ಕ್ರೀಡಾಕೂಟ: ಚಂದ್ರಯಾನ 3 ಬಾಹ್ಯಾಕಾಶ ನೌಕೆ ಸ್ಥಬ್ದ ಚಿತ್ರದಲ್ಲಿ ನಾರಾವಿ ಗ್ರಾ.ಪಂ. ಗೆ ಪ್ರಶಸ್ತಿ

Suddi Udaya
error: Content is protected !!