ಶಿರ್ಲಾಲು: “ಭವತಿ ಭಿಕ್ಷಾಂದೇಹಿ” ನಿಧಿ ಸಂಗ್ರಹ ಅಭಿಯಾನದ ಧನಸಹಾಯ ಹಸ್ತಾಂತರ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವದ ಸಂದರ್ಭ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಪಡುಬಿದ್ರಿ ಕಂಚಿನಡ್ಕ ಶ್ರೀಮತಿ ಸುರೇಖಾ ಪ್ರಶಾಂತ್ ದಂಪತಿಯ 10 ತಿಂಗಳ ಕಂದಮ್ಮ ಧ್ರುವಿಯ ವೈದ್ಯಕೀಯ ವೆಚ್ಚಕ್ಕಾಗಿ “ಭವತಿ ಭಿಕ್ಷಾಂದೇಹಿ” ನಿಧಿ ಸಂಗ್ರಹ ಅಭಿಯಾನ ನಡೆಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಧ್ರುವಿಯು ಸಾವನ್ನಪ್ಪಿದ್ದಾಳೆ. ಸಂಗ್ರಹವಾದ ರೂ. 1,03,954 ರಲ್ಲಿ ರೂ. 53,955 ನ್ನು ಜ.14ರಂದು ಶ್ರೀ ಕ್ಷೇತ್ರ ಶಿರ್ಲಾಲು ಇಲ್ಲಿ ಹಸ್ತಾಂತರ ಮಾಡಲಾಯಿತು.

ಉಳಿದ 50,000 ರೂಪಾಯಿಯನ್ನು ಅವರ ಮಗಳ ಹೆಸರಿನಲ್ಲಿ 3 ಕುಟುಂಬಕ್ಕೆ ನಮ್ಮ ಸಂಸ್ಥೆಯ ತುರ್ತು ಸೇವಾ ಯೋಜನೆಗೆ (83ನೇ, 84ನೇ, 85ನೇ ತುರ್ತು ಸೇವಾ ಯೋಜನೆ) ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಭಕ್ತರು ಹಾಗೂ ಟ್ರಸ್ಟ್ ನ ಸೇವಾ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!