8 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಾಜಿದ್ ಪಾಷನನ್ನು ಹೊಳೆನರಸೀಪುರದಲ್ಲಿ ಬಂಧಿಸಿದ ಧಮ೯ಸ್ಥಳ ಪೊಲೀಸರು

Suddi Udaya

ಧರ್ಮಸ್ಥಳ: ಇಲ್ಲಿಯ ಪೊಲೀಸ್ ಠಾಣಾ ಅ.ಕ್ರ 292/2015 ಕನಾ೯ಟಕ ಗೋಹತ್ಯೆ ಮತ್ತು ಜಾನುವಾರು ಸಂರಕ್ಷಣೆ ತಡೆ ಕಾಯ್ದೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜ. 17ರಂದು ಪೊಲೀಸರು ಬಂಧಿಸಿದ್ದಾರೆ.

ಹೊಳೆನರಸೀಪುರ, ಹಾಸನ ನಿವಾಸಿ ವಾಜೀದ್ ಪಾಷಾ (54ವ), ಎಂಬವರು, ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೇ, ಸುಮಾರು 8 ವರ್ಷದಿಂದ ತಲೆಮರೆಸಿಕೊಂಡಿದ್ದವರನ್ನು, ಜ .17ರಂದು ಹಾಸನ ಹೊಳೆನರಸೀಪುರದಿಂದ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹಾಗೂ ಧಮ೯ಸ್ಥಳ ಠಾಣಾ ಪಿಎಸ್ಐ ಅನೀಲ್ ಕುಮಾರ್.ಡಿ.(ಕಾ.ಸು) & ಪಿಎಸ್ಐ ಸಮರ್ಥ ಆರ್ ಗಾಣಿಗೆರ (ತನಿಖೆ) ರವರ ಮಾಗ೯ದಶ೯ನದಂತೆ ಧರ್ಮಸ್ಥಳ ಠಾಣಾ ಹೆಚ್. ಸಿ ರಾಜೇಶ್ ಎನ್, ಪಿ‌.ಸಿ ಗೋವಿಂದ ರಾಜ್, ಪಿ.ಸಿ ಮಲ್ಲಿಕಾರ್ಜುನ್ ರವರು ದಸ್ತಗಿರಿ, ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Comment

error: Content is protected !!