ಜ.27: ಸವಣಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 42ನೇ ವರ್ಷದ ಏಕಾಹ ಭಜನಾ

Suddi Udaya

ಸವಣಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜ.27 ರಂದು 42ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮವು ಅರ್ಚಕರಾದ ಗೋಪಾಲಕೃಷ್ಣ ಮಂಜಿತ್ತಾಯ ಕೊಲ್ಲಿ ಹಾಗೂ ರಮಾನಂದ ನಾಥು ಸುಲ್ಕೇರಿ ಇವರಿಂದ ಪೂಜಾ ವಿಧಿ ವಿಧಾನಗಳು ನಡೆಯಲಿದೆ.

ಬೆಳಿಗ್ಗೆ 9.30ಕ್ಕೆ ಗಣಹೋಮ, ಮಧ್ಯಾಹ್ನ 12.00ಕ್ಕೆ ವಿಶೇಷ ಪೂಜೆ , ಪ್ರಸಾದ ವಿತರಣೆ, ರಾತ್ರಿ 7.00 ರಿಂದ 3.00 ರವರೆಗೆ ಆಹ್ವಾನಿತ ಭಜನಾ ತಂಡಗಳಿಂದ ಕುಣಿತಾ ಮತ್ತು ತಂಬಲದಾಟಿಯ ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆಯು ನಡೆಯಲಿದೆ.

ಪ್ರತಿ 3 ಗಂಟೆಗೊಮ್ಮೆ ಜಾಮ ಪೂಜೆ ನಡೆಯಲಿದೆ.

Leave a Comment

error: Content is protected !!