ಕೊಯ್ಯುರು : ಅಯೋಧ್ಯೆ ಶ್ರೀ ಬಾಲರಾಮ ಪ್ರತಿಷ್ಠಾಪನೆ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ

Suddi Udaya

ಕೊಯ್ಯೂರು : ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜ.22 ರಂದು ನಡೆಯಲಿರುವ ಪ್ರಯುಕ್ತ ಶ್ರೀ ಕೃಷ್ಣ ಭಜನಾ ಮಂಡಳಿ ಆದೂರು ಪೆರಾಲ್ ಕೊಯ್ಯೂರು ಇದರ ವತಿಯಿಂದ ಆದೂರು ಪೇರಾಲಿನ ಪೇಟೆ ಹಾಗೂ ರಸ್ತೆ ಬದಿಯ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶ್ರೀ ಕೃಷ್ಣ ಭಜನಾ ಮಂಡಳಿಯ ಮಕ್ಕಳ ತಂಡ ಮಹಿಳೆಯರ ತಂಡ ಹಾಗೂ ಪುರುಷರ ತಂಡಗಳು ಜಂಟಿಯಾಗಿ ಈ ಸ್ವಚ್ಛದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Comment

error: Content is protected !!