25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸ್ಯಾಮ್ಸಂಗ್ ಕಂಪೆನಿಯ ಹೊಸ ವಿನ್ಯಾಸದ ನವೀನ ಮಾದರಿಯ ಗ್ಯಾಲಕ್ಸಿ S24 ಅಲ್ಟ್ರಾ ಮಾರುಕಟ್ಟೆಗೆ ಬಿಡುಗಡೆ

ಉಜಿರೆ :ಸ್ಯಾಮ್ಸಂಗ್ ಕಂಪೆನಿಯ ಹೊಸ ವಿನ್ಯಾಸದ ನವೀನ ಮಾದರಿಯ ಗ್ಯಾಲಕ್ಸಿ S24 Family ಜ.24ರಂದು ಉಜಿರೆ ಓಶನ್ ಪಾರ್ಲ್ ನಲ್ಲಿ ಮಾರುಕಟ್ಟೆಗೆ ಅನಾವರಣಗೊಳಿಸಲಾಯಿತು.

ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೊಬೈಲ್ ನ ಬಿಡುಗಡೆಗೊಳಿಸಿ ಮಾತನಾಡಿದ ಝೋನಲ್ ಸೇಲ್ಸ್ ಮ್ಯಾನೇಜರ್ ಇಸ್ಮಾಯಿಲ್ ಶರೀಫ್ ರವರು ಮೊಬೈಲ್ ನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮೊಬೈಲ್ ನ ಮುಂಗಡ ಕಾಯ್ದಿರಿಸಿದ್ದ ಬೆನಕ ಹಾಸ್ಪಿಟಲ್ ವೈದ್ಯರಾದ ಗೋಪಾಲಕೃಷ್ಣ, ದಿಶಾ ಫುಡ್ ಕಾರ್ನರ್ ನ ಅಕ್ಷಯ್, ಉದ್ಯಮಿ ಜಗದೀಶ್ ಆಚಾರ್ಯ, ದುಬೈನ ಉದ್ಯಮಿ ಅಕ್ಷಯ್, ದಿಶಾ ಬೇಕರಿಯ ದಿನೇಶ್ , ಮೊಬೈಲ್ ಶಾಪ್ ನ ಮಾಲಕರಾದ ರಿಶಾದ್, ಪವರ್ ಆನ್ ಬ್ಯಾಟರಿಯ ಮಾಲಕರಾದ ಶೀತಲ್ ಜೈನ್ ಹಾಗೂ ಲ್ಯಾಡಿಂಗ್ ಡೀಲರ್ ಸಾಹುಲ್ ಹಮೀದ್ ರವರಿಗೆ ಹೊಸ ಮೊಬೈಲನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಏರಿಯಾ ಬಿಸಿನೆಸ್ ಮ್ಯಾನೇಜರ್ ನಾಗೇಂದ್ರ ಪ್ರಭು, ಏರಿಯಾ ಬಿಸಿನೆಸ್ ಸೇಲ್ಸ್ ಆಫೀಸರ್ ವಿಜಯ್ ದಾಸ್, ಅಜಯ್ ಬಿ.ಎಮ್, ತಾಲೂಕಿನ ಅಧಿಕೃತ ವಿತರಕರಾದ ಕಲ್ಲಾರಿ ಕಮ್ಯುನಿಕೇಶನ್ ಮಾಲಕರಾದ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಿಟೇಲರುಗಳಾದ ಫಾಲ್ಸ್ ಮೊಬೈಲ್ ಮಾಲಕರಾದ ರಾಘವೇಂದ್ರ, ಹೈಟೆಕ್ ಮೊಬೈಲ್ ಮಾಲಕರಾದ ಶರೀಫ್, ಅಯಾನ್ಶ್ ಎಂಟರ್‌ಪ್ರೈಸಸ್ ನ ಮಾಲಕರಾದ ಅರಿಯಂತ್ ಜೈನ್, ಸ್ಮಾರ್ಟ್ ಮೊಬೈಲ್ ಮಾಲಕರಾದ ಅಕ್ಷತ್ ಉಪಸ್ಥಿತರಿದ್ದು ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಲ್ಲಾರಿ ಕಮ್ಯುನಿಕೇಶನ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗಣೇಶ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Related posts

ಶಿಶಿಲ: ನಿಷೇಧಿತ ಪ್ರದೇಶದಲ್ಲಿ ರಾತ್ರಿ ಮೀನು ಹಿಡಿಯಲು ಬಂದವರನ್ನು ಪತ್ತೆ ಹಚ್ಚಿದ ಸ್ಥಳೀಯರು

Suddi Udaya

ರೇಖ್ಯ: ಪೊರ್ಕಳ ಅರಣ್ಯ ಪ್ರದೇಶದಲ್ಲಿ ಬಾರಿ ಬೆಂಕಿ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುರಕ್ಷಾ ವಿಮಾ ಯೋಜನೆ ಚೆಕ್ ಹಸ್ತಾಂತರ

Suddi Udaya

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ಕೂರತ್ ತಂಙಳ್ ಉರೂಸ್ ಪ್ರಚಾರ ಪೋಸ್ಟರ್ ಬಿಡುಗಡೆ

Suddi Udaya

ಇಳಂತಿಲ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆ

Suddi Udaya

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ಯುರೇಕಾ- 2026” ರ ಉದ್ಘಾಟನೆ

Suddi Udaya
error: Content is protected !!