ಮಲವಂತಿಗೆ: ಉಮೇಶ್ ರವರಿಗೆ ಹಲ್ಲೆ, ಬೆದರಿಕೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಮಲವಂತಿಗೆ ನಿವಾಸಿ ಉಮೇಶ್‌ ರವರು ರಾತ್ರಿ ಮೋಟಾರ್ ಸೈಕಲ್ ನಲ್ಲಿ ಮನೆಗೆ ಹೋಗುವ ಸಂದರ್ಭ ಉಕ್ಕುಡ ಎಂಬಲ್ಲಿ ಗುಂಪೊಂದು ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಘಟನೆ ಜ.23 ರಂದು ನಡೆದಿದೆ.

ಮಲವಂತಿಗೆ ನಿವಾಸಿ ಉಮೇಶ್‌ (35) ಎಂಬವರ ದೂರಿನಂತೆ, ಜ. 23 ರಂದು ರಾತ್ರಿ ಉಮೇಶ್ ರವರು ಬಾಬ್ತು ಮೋಟಾರ್‌ ಸೈಕಲ್‌ ನಲ್ಲಿ ಮನೆಗೆ ಹೋಗುತ್ತಾ ಉಕ್ಕುಡ ಎಂಬಲ್ಲಿಗೆ ತಲುಪಿದಾಗ, ಆರೋಪಿಗಳಾದ ರಮೇಶ್‌ ನಾಯ್ಕ, ದಯಾನಂದ, ರವಿ,ಸುರೇಶ, ಸಂತೋಷ್‌, ಪ್ರವೀಣ್‌ ಕುಮಾರ್‌ , ಅರುಣ್‌ , ಆದಿ ಜೈನ್‌, ಅನಿಲ್‌ ಜೈನ್‌, ಸಾವಂತ್‌ ,ಸುನೀಲ್‌,ಪ್ರಕಾಶ್‌ ಕುಮಾರ್‌, ಮತ್ತು ಯೂಸುಫ್‌ ರವರು ಉಮೇಶ್ ರವರನ್ನು ತಡೆದು ನಿಲ್ಲಿಸಿ, ಆರೋಪಿಗಳ ಪೈಕಿ ರಮೇಶ್‌ ನಾಯ್ಕ ರವರ ಮನೆಯ ಅಂಗಳಕ್ಕೆ ಎಳೆದುಕೊಂಡು ಹೋಗಿದ್ದು, ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಪಡಿಸಿರುತ್ತಾರೆ.

ಆರೋಪಿಗಳ ಪೈಕಿ ರಮೇಶ್‌ ನಾಯ್ಕ , ದಯಾನಂದ, ರವಿ ಮತ್ತು ಸುರೇಶ್‌ ರವರು ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ, ಮೆಣಸಿನ ಹುಡಿ ಎರಚಿದ್ದು, ಬಳಿಕ‌ ಆರೋಪಿಗಳು ಜೀವ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ. ನಂ: 06/2024 ಕಲಂ: 143,147,148,341,324,504,506, ಜೊತೆಗೆ 149 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Comment

error: Content is protected !!