ಧರ್ಮಸ್ಥಳ: ದೊಂಡೋಲೆ ಪರಶುರಾಮ ದೇವಸ್ಥಾನಕ್ಕೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಗೋಪಾಲ್ ಪಿ. ಎ ಭೇಟಿ

Suddi Udaya

ಧರ್ಮಸ್ಥಳ : ಇಲ್ಲಿಯ ದೊಂಡೋಲೆ ಎಂಬಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಪರಶುರಾಮ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಏಕಹ ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ಕಾರ್ಯದರ್ಶಿಯವರಾದ ಗೋಪಾಲ್ ಪಿ. ಎ ಕುಟುಂಬಸ್ಥರು ಭೇಟಿ ನೀಡಿದರು.

ಇವರು ಚಾಮರಾಜನಗರ, ಮೈಸೂರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿ. ಇ. ಓ. ಹಾಗೂ ಮೈಸೂರು ದಸರಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ನೂತನ ದೇವಸ್ಥಾನದ ಕಾರ್ಯಕ್ರಮ ಹಾಗೂ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಜೊತೆಗೆ ಆರ್. ಡಿ. ಪಿ. ಆರ್. ನೌಕರ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ ಉಪಸ್ಥಿತರಿದ್ದರು.

ಕಾರ್ಯದರ್ಶಿಯವರಿಗೆ ದೇವಸ್ಥಾನದ ವತಿಯಿಂದ ಅನಂತರಾಮ್ ರಾವ್ , ರವಿ ಭಟ್, ಸೂರ್ಯನಾರಾಯಣ್ ರಾವ್, ಶ್ರೀನಿವಾಸ ಭಟ್, ಕಿರಣ್ ಕುಮಾರ್, ಅಜಯ್ ದೊಂಡೋಲೆ, ದಾಮೋದರ್ ದೊಂಡೋಲೆ, ಪ್ರಕಾಶ್, ಗೌರವಿಸಿದರು.

Leave a Comment

error: Content is protected !!