29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉರುವಾಲು: ಗ್ರಾಮ ದೈವಗಳಿಗೆ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

ಉರುವಾಲು :ಉರುವಾಲು ಗ್ರಾಮದ ಕಾರಿಂಜ ಬಾಕಿಮಾರಿನಲ್ಲಿ ವರ್ಷಂಪ್ರತಿಯಂತೆ ಗ್ರಾಮ ದೈವಗಳಿಗೆ ಹಾಗೂ ಪರಿವಾರ ನೇಮೋತ್ಸವವು ಜ.25, 26 ರಂದು ನಡೆಯಿತು.

ಜ.25ರಂದು ಪಿಲಿಚಾಮುಂಡಿ ದೈವಕ್ಕೆ ಪರ್ವಹಾಗೂ ತೋರಣ ಮುಹೂರ್ತ ಸಂಜೆ ಹೋಮ, ಸ್ಥಳ ಶುದ್ಧಿ, ಬಿಂಬ ಶುದ್ದಿ, ಕಲಶ ಶುದ್ದಿ ಚೆಂಡೆತ್ತಿಮಾರು ಗುತ್ತಿನಿಂದ ಭಂಡಾರ ಹೊರಡುವುದು, ರಾತ್ರಿ ಕಾರಿಂಜ ಬಾಕಿಮಾರಿನಲ್ಲಿ ಭಂಡಾರ- ಇಳಿಸುವುದು, ಪಿಲಿಚಾಮುಂಡಿ ಭಂಡಾರ ಇಳಿಸಿ ದೈವಗಳಿಗೆ ಪರ್ವ ಹಾಗೂ ರಾಜಂದೈವ ಕಲ್ಕುಡ, ಪಿಲಿಚಾಮುಂಡಿ ಇತರ ಪರಿವಾರ ದೈವಗಳಿಗೆ ಎಣ್ಣೆ ವೀಳ ಕೊಡುವುದು ಮತ್ತು ನೇಮ, ಪಲ್ಲಪೂಜೆ, ಅನ್ನಸಂತರ್ಪಣೆ, ಕಲ್ಕುಡ, ಕಲ್ಲುರ್ಟಿ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.

ಜ.26ರಂದು ಸಂಜೆ ಎಣ್ಮಣ್ಣಾಯ ದೈವದ ನೇಮಕ್ಕೆ ಎಣ್ಣೆ ವೀಳ್ಯ ಕೊಡುವುದು- ಅಂಕ-ಚೆಂಡು, ಎಣ್ಮಣ್ಣಾಯ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ, ಪಂಜುರ್ಲಿ ದೈವದ ನೇಮಕ್ಕೆ ಎಣ್ಣೆ ವೀಳ್ಯ ಕೊಡುವುದು, ನೇಮ ಜರುಗಿತು.


ಜ.28ರಂದು ಬೆಳಿಗ್ಗೆ ಕುಡುಮದ ಪಂಜುರ್ಲಿ, ಕೊರಗಜ್ಜ, ಗುಳಿಗ ಹಾಗೂ ಮುಗೇರ ಕೋಲ (ಮುಗೇರರ ಬನದಲ್ಲಿ), ಸಂಜೆ ಮಹಮ್ಮಾಯಿಗೆ ಸೇವೆ ಹಾಗೂ ಮಾರಿ ಪೂಜೆ ನಡೆಯಲಿದೆ.

ಆಡಳಿತ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ನೇಮೋತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು. ಹಾಗೂ ಉರುವಾಲು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಉರುವಾಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ವಿವಿಧ ಸಮಿತಿಯ ವತಿಯಿಂದ ಸತ್ಯನಾರಾಯಣ ಪೂಜೆ ಹಾಗೂ ಏಕಾಹ ಭಜನಾ ಮಹೋತ್ಸವ

Suddi Udaya

ಧರ್ಮಸ್ಥಳ :ಅಜಿಕುರಿ ಹೆಜ್ಜೇನು ದಾಳಿಯಿಂದ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಲು ಶಿಫಾರಸ್ಸು ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ರಿಗೆ ಸಮಿತಿಯಿಂದ ಗೌರವಾರ್ಪಣೆ

Suddi Udaya

ದ. ಕ. ಗ್ಯಾರೇಜು ಮಾಲಕರ ಸಂಘ ಬೆಳ್ತಂಗಡಿ ವಲಯಕ್ಕೆ ಸಮಗ್ರ ಪ್ರಶಸ್ತಿ

Suddi Udaya

ಕಳಸ ನದಿಯಲ್ಲಿ ಮುಳುಗಿದ ಯುವಕನ ದೇಹ ಪತ್ತೆ; ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು

Suddi Udaya

ಅತ್ಯಂತ ಕುತೂಹಲ ಕೆರಳಿಸಿದ ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ : ಅಧ್ಯಕ್ಷರಾಗಿ ಜೋಯಲ್ ಗಾಡ್ಫಿ ಮೆಂಡೋನ್ಸಾ, ಹಾಗೂ ಉಪಾಧ್ಯಕ್ಷರಾಗಿ ಕಾಂತಪ್ಪ ಗೌಡ ಆಯ್ಕೆ

Suddi Udaya
error: Content is protected !!