38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉರುವಾಲು: ಗ್ರಾಮ ದೈವಗಳಿಗೆ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

ಉರುವಾಲು :ಉರುವಾಲು ಗ್ರಾಮದ ಕಾರಿಂಜ ಬಾಕಿಮಾರಿನಲ್ಲಿ ವರ್ಷಂಪ್ರತಿಯಂತೆ ಗ್ರಾಮ ದೈವಗಳಿಗೆ ಹಾಗೂ ಪರಿವಾರ ನೇಮೋತ್ಸವವು ಜ.25, 26 ರಂದು ನಡೆಯಿತು.

ಜ.25ರಂದು ಪಿಲಿಚಾಮುಂಡಿ ದೈವಕ್ಕೆ ಪರ್ವಹಾಗೂ ತೋರಣ ಮುಹೂರ್ತ ಸಂಜೆ ಹೋಮ, ಸ್ಥಳ ಶುದ್ಧಿ, ಬಿಂಬ ಶುದ್ದಿ, ಕಲಶ ಶುದ್ದಿ ಚೆಂಡೆತ್ತಿಮಾರು ಗುತ್ತಿನಿಂದ ಭಂಡಾರ ಹೊರಡುವುದು, ರಾತ್ರಿ ಕಾರಿಂಜ ಬಾಕಿಮಾರಿನಲ್ಲಿ ಭಂಡಾರ- ಇಳಿಸುವುದು, ಪಿಲಿಚಾಮುಂಡಿ ಭಂಡಾರ ಇಳಿಸಿ ದೈವಗಳಿಗೆ ಪರ್ವ ಹಾಗೂ ರಾಜಂದೈವ ಕಲ್ಕುಡ, ಪಿಲಿಚಾಮುಂಡಿ ಇತರ ಪರಿವಾರ ದೈವಗಳಿಗೆ ಎಣ್ಣೆ ವೀಳ ಕೊಡುವುದು ಮತ್ತು ನೇಮ, ಪಲ್ಲಪೂಜೆ, ಅನ್ನಸಂತರ್ಪಣೆ, ಕಲ್ಕುಡ, ಕಲ್ಲುರ್ಟಿ ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಿತು.

ಜ.26ರಂದು ಸಂಜೆ ಎಣ್ಮಣ್ಣಾಯ ದೈವದ ನೇಮಕ್ಕೆ ಎಣ್ಣೆ ವೀಳ್ಯ ಕೊಡುವುದು- ಅಂಕ-ಚೆಂಡು, ಎಣ್ಮಣ್ಣಾಯ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ, ಪಂಜುರ್ಲಿ ದೈವದ ನೇಮಕ್ಕೆ ಎಣ್ಣೆ ವೀಳ್ಯ ಕೊಡುವುದು, ನೇಮ ಜರುಗಿತು.


ಜ.28ರಂದು ಬೆಳಿಗ್ಗೆ ಕುಡುಮದ ಪಂಜುರ್ಲಿ, ಕೊರಗಜ್ಜ, ಗುಳಿಗ ಹಾಗೂ ಮುಗೇರ ಕೋಲ (ಮುಗೇರರ ಬನದಲ್ಲಿ), ಸಂಜೆ ಮಹಮ್ಮಾಯಿಗೆ ಸೇವೆ ಹಾಗೂ ಮಾರಿ ಪೂಜೆ ನಡೆಯಲಿದೆ.

ಆಡಳಿತ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ನೇಮೋತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು. ಹಾಗೂ ಉರುವಾಲು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಕಲ್ಮಂಜ: ನಿಡಿಗಲ್ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿ

Suddi Udaya

ಅಳದಂಗಡಿ: ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ಆ.18: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡರೆ ಗೌಜಿ ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅನ್ನಛತ್ರದಲ್ಲಿ ಹಾಲು ಉಕ್ಕಿಸುವ ಕಾರ್ಯ

Suddi Udaya

ಮೇಲಂತಬೆಟ್ಟು: ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

Suddi Udaya

ನಡ ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!