30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕರ್ನಾಟಕ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಜಿಲ್ಲಾ ಮಟ್ಟದ ಪರಿಷತ್ತು

ಮಂಗಳೂರು: ಹಿಂದೂ ಧರ್ಮವನ್ನು ಉಳಿಸುವಲ್ಲಿ ದೇವಸ್ಥಾನಗಳ ಮಹತ್ವ ಅಪಾರವಾಗಿದೆ. ದೇವಸ್ಥಾನಗಳ ವ್ಯವಸ್ಥಾಪನೆಯನ್ನು ಬ್ರಿಟಿಷರು ಸರಕಾರೀಕರಣಗೊಳಿಸಿ ಭಾವದಿಂದಲ್ಲ, ಶಾಸನದಿಂದ ಆಳಿದರು. ಶಾಸ್ತ್ರಕ್ಕನುಸಾರ ನಡೆಯುತ್ತಿದ್ದ ಶಾಸನವನ್ನು ನಾಶಗೊಳಿಸಿ ‘ಎಂಡೊಮೆಂಟ್ ಆಕ್ಟ್’ ಮೂಲಕ ಹಿಂದೂ ಧರ್ಮದ ಮೇಲೆ ಆಳ್ವಿಕೆ ಮಾಡತೊಡಗಿದರು. ಧಾರ್ಮಿಕ ಪೀಳಿಗೆಯ ಮಹತ್ವವನ್ನರಿತ ಬ್ರಿಟಿಷರು ಅದನ್ನೇ ನಾಶಗೊಳಿಸಿಬಿಟ್ಟರು. ಅದರ ಪರಿಣಾಮವನ್ನು ಇಂದು ಸಂಪೂರ್ಣ ಸಮಾಜವು ಅನುಭವಿಸಬೇಕಾಗಿದೆ. ನಾವು ಈಗ ಎಚ್ಚೆತ್ತುಗೊಳ್ಳದಿದ್ದರೆ ದೇವಸ್ಥಾನಗಳಲ್ಲಿ ನಮಾಜ ಮಾಡುವ ಪರಿಸ್ಥಿತಿ ಬಹುಬಹುದು. ನಮ್ಮ ಉಳಿಕೆಗಾಗಿ ಸಂಘಟನೆ ಬಹಳ ಮಹತ್ವದ್ದು.ಅದಕ್ಕಾಗಿಎಲ್ಲರೂ ಒಟ್ಟಾಗಿ ಹೋರಾಡೋಣ, ಎಂದು ಎಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀಹರಿ ನಾರಾಯಣ ದಾಸ ಆಸ್ರಣ್ಣ ಪ್ರತಿಪಾದಿಸಿದರು.

ಅವರು ಜ.26 ರಂದು ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತಿನಲ್ಲಿ ಸುಮಾರು 200 ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದರು, ತೆಂಕಕಾರಂದೂರು ಇಲ್ಲಿನ ಶ್ರೀವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಶ್ರೀಕೃಷ್ಣ ಸಂಪಿಗೆತಾಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀಹರಿ ನಾರಾಯಣ ದಾಸ ಆಸ್ರಣ್ಣ/’ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ರಾಜ್ಯ ಸಂಯೋಜಕರಾದ ಮೋಹನ ಗೌಡ ಇವರು ದೀಪಪ್ರಜ್ವಲನೆಯನ್ನು ಮಾಡಿ ಉದ್ಘಾಟಿಸಿದರು.

ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತ ಮಾಡುವುದರೊಂದಿಗೆ ದೇವಸ್ಥಾನಗಳ ಹಿತದ ದೃಷ್ಟಿಯಿಂದ ದೇವಸ್ಥಾನಗಳ ಧರ್ಮದರ್ಶಿಗಳು, ವಿಶ್ವಸ್ಥರು, ಪುರೋಹಿತರು ಮುಂತಾದವರು ಪಾಲ್ಗೊಂಡಿದ್ದರು. ಈ ಪರಿಷತ್ತನ್ನು ಶ್ರೀವಿಷ್ಣು ಮೂರ್ತಿ ದೇವಸ್ಥಾನ (ತೆಂಕಕಾರಂದೂರು) ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ (ಗುಡ್ರಾದಿ, ರೇಖ್ಯ), ‘ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.


ದೇವಸ್ಥಾನಗಳು ಕೇವಲ ಪೂಜೆಗಾಗಿ ಸೀಮಿತವಾಗಿಡದೇ ಸಂಸ್ಕೃತಿ, ಕಲೆಯ ರಕ್ಷಣೆಯಾಗಬೇಕು. ದೇವಸ್ಥಾನಗಳಲ್ಲಿ ಧರ್ಮಪರಂಪರೆಯ ಶಿಕ್ಷಣ ನೀಡುವಂತಾಗಬೇಕು. ಅಂತಹ ಕಾರ್ಯಕ್ರಮಗಳ ಆಯೋಜನೆಯಾಗಬೇಕು ಎಂದು ಜಿತಕಾಮನಂದಜಿ, ರಾಮಕೃಷ್ಣ ಮಠ,ಮಂಗಳೂರು ಹೇಳಿದರು.

ಪೂ.ರಮಾನಂದ ಗೌಡ ಅವರು ಮಾತನಾಡಿ, ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳು. ದೇವಸ್ಥಾನಗಳು ಎಂದರೆ ದೇವತೆಗಳು ವಾಸ ಮಾಡುವ ಚೈತನ್ಯಮಯ ಕ್ಷೇತ್ರವಾಗಿದೆ. ಇದು ಹಿಂದೂ ಧರ್ಮದ ಆಧಾರ ಸ್ಥಂಬವಾಗಿದೆ. ಹಾಗಾಗಿ ದೇವಸ್ಥಾನಗಳು ಸದೃಢವಾಗಿದ್ದರೆ, ಧರ್ಮ, ರಾಷ್ಟ್ರ ಮತ್ತು ಸಮಾಜವು ಸದೃಡವಾಗಿರುತ್ತದೆ ಎಂದರು.


ಮೋಹನ್‌ ಗೌಡ ಅವರು ಮಾತನಾಡಿ, ಇಂದು ದೇವಸ್ಥಾನಕ್ಕೆ ಭಕ್ತರು ಪಾಶ್ಚಾತ್ಯರ ಅಸಭ್ಯ ಉಡುಪು ಧರಿಸಿ ದೇವಸ್ಥಾನಗಳ ಒಳಗೆ ಬರುತ್ತಾರೆ. ಅದರಿಂದ ದೇವಸ್ಥಾನಗಳ ಪಾವಿತ್ರ್ಯ ನಷ್ಟವಾಗುತ್ತದೆ. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ 100 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯ ಮಾಡಲು ಜಿಲ್ಲೆಯ 100 ಕ್ಕೂ ಅಧಿಕ ವಿಶ್ವಸ್ಥರು ಸ್ವಯಂಪ್ರೇರಿತರಾಗಿ ಒಪ್ಪಿದ್ದಾರೆ. ಅದರ ಪ್ರಾರಂಭಿಕ ಹಂತದಲ್ಲಿ ವಸ್ತ್ರಸಂಹಿತೆಯ ಫಲಕವನ್ನು ದೇವಸ್ಥಾನಗಳಲ್ಲಿ ಅಳವಡಿಸುವುದು, ಭಕ್ತಾದಿಗಳಿಗೆ ವಸ್ತ್ರಸಂಹಿತೆಯ ಬಗ್ಗೆ ಜನಜಾಗೃತಿ ಮೂಡಿಸುವುದು,ಯಾರಾದರೂ ಅಸಭ್ಯ ಉಡುಪು ಧರಿಸಿ ಬಂದರೆ ಪರ್ಯಾಯ ಸಾತ್ತ್ವಿಕ ಉಡುಪು ನೀಡಲು ದೇವಸ್ಥಾನಗಳಲ್ಲಿ ವ್ಯವಸ್ಥೆ ಮಾಡುವುದು,ಆರತಿ ಸಮಯದಲ್ಲಿ ವಸ್ತ್ರ ಸಂಹಿತೆಯ ಬಗ್ಗೆ ಜನಜಾಗೃತಿ ಮೂಡಿಸುವುದು ಹೀಗೆ ಹಂತಹಂತವಾಗಿ ವಸ್ತ್ರಸಂಹಿತೆಯನ್ನು ಅಳವಡಿಸಲಾಗುವುದು ಎಂದರು.

ರಾಜಶೇಖರ ಹೆಬ್ಬಾರ ಅವರು ಮಾತನಾಡಿ, ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿದರೆ ಮಾತ್ರ ಭಗವಂತನ ಅಸ್ತಿತ್ವದ ಅರಿವಾಗುತ್ತದೆ. ಪಂಚಜ್ಞಾನೇಂದ್ರಿಯಗಳು,ಪಂಚಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಗಳನ್ನು ಶುದ್ಧೀಕರಿಸಿ ಅದನ್ನು ಈಶ್ವರನಿಗೆ ಅರ್ಪಿಸಬೇಕು. ಅದಕ್ಕಾಗಿ ದೇವಸ್ಥಾನಗಳು ಮಹತ್ವದ್ದಾಗಿವೆ ಮತ್ತು ಅವುಗಳ ಪಾವಿತ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


ದೇವಸ್ಥಾನಗಳ ನಿಧಿಯನ್ನು ಅನ್ಯಧರ್ಮೀಯರಿಗೆ ನೀಡುವುದು, ಸರಕಾರೀಕರಣವಾದ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಸಹಾಯ ಮಾಡದೇ ಇತರ ಧರ್ಮೀಯರ ಪ್ರಾರ್ಥನಾ ಸ್ಥಳಕ್ಕೆ ನೀಡಲಾಗುತ್ತದೆ. ದೇವಸ್ಥಾನಗಳ ಜಮೀನನ್ನು ಕಬಳಿಸುವುದು, ದೇವಸ್ಥಾನಗಳನ್ನು ಅನಧಿಕೃತವೆಂದು ನೆಲಸಮಗೊಳಿಸುವುದು, ಮಸೀದಿಗಳನ್ನು ಮತ್ತು ಇಗರ್ಜಿಗಳನ್ನು ಬಿಟ್ಟುಬಿಡುವುದು ಇವೆಲ್ಲವುಗಳ ವಿರುದ್ಧ ಮಹಾಸಂಘವು ವಕೀಲರ ಮೂಲಕ ದೇವಸ್ಥಾನಗಳ ರಕ್ಷಣೆಗೆ ಕಟಿಬದ್ಧವಾಗಿ ಹೋರಾಡುತ್ತಿದೆ.ಸಂಘಟನೆಯಿಂದ ಕಾರ್ಯ ಬೇಗನೇ ಜ್ವಾಲೆಯು ಕ್ರಾಂತಿಯ ರೂಪ ತಾಳಿ ಎಲ್ಲ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸುತತದೆ.ಅದಕ್ಕಾಗಿ ನಿಮ್ಮೆಲ್ಲರ ಯೋಗದಾನ ಅವಶ್ಯವಾಗಿದೆ ಎಂದು ಚಂದ್ರ ಮೊಗೇರ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ ತಿಳಿಸಿದ್ದಾರೆ.

Related posts

ಬೆಳಾಲು ಶ್ರೀ ಅನಂತೇಶ್ವರ ಭಜನಾ ಮಂಡಳಿ ನೇತೃತ್ವದಲ್ಲಿ ಮಕ್ಕಳ ಭಜನಾ ತರಬೇತಿ ತಂಡ ಉದ್ಘಾಟನೆ

Suddi Udaya

ಉಜಿರೆ: ಕನಸು ಇದು ಭರವಸೆಯ ಬೆಳಕು ಕಾರ್ಯಕ್ರಮ

Suddi Udaya

ಪುದುವೆಟ್ಟು: ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ

Suddi Udaya

ಸಾಮಾಜಿಕ ಜಾಲತಾಣಗಳ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಜಿಲ್ಲಾ ಸಾಮಾಜಿಕ ಜಾಲಾತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಗಣೇಶ್ ರಿಂದ ಬೆಳ್ತಂಗಡಿ ಠಾಣೆಗೆ ದೂರು

Suddi Udaya

ಕೊಯ್ಯೂರು ಪ್ರಾ.ಕೃ.ಪ. ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.157 ಕೋಟಿ ವಾರ್ಷಿಕ ವ್ಯವಹಾರ, ರೂ.61.70ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ. 10.25 ಡಿವಿಡೆಂಟ್

Suddi Udaya

ಕನ್ಯಾಡಿ ಗ್ರಾಮದ ಪಾರ್ನಡ್ಕ ದಲ್ಲಿ ದಿ| ರಾಜೇಂದ್ರ ಎಸ್ ಸುರಕ್ಕ್ಯೆಗುತ್ತು ಇವರ ಸ್ಮರಣಾರ್ಥ ಬಸ್ ತಂಗುದಾಣ ಉದ್ಘಾಟನೆ

Suddi Udaya
error: Content is protected !!