ಕುಕ್ಕೇಡಿ ಸ್ಫೋಟ ಪ್ರಕರಣ: ಮೃತ ಕುಟುಂಬಕ್ಕೆ ಬೆಳ್ತಂಗಡಿ ಕೆಎಸ್ಎಂಸಿಎ ಯಿಂದ ಸಹಾಯ ಹಸ್ತ

Suddi Udaya

ಬೆಳ್ತಂಗಡಿ :ಜ 28 ರ ಕುಕ್ಕೇಡಿ ಗೋಳಿಯಂಗಡಿ ಸ್ಫೋಟ ಪ್ರಕರಣದಲ್ಲಿ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿದ ಕೆ ಎಸ್ ಎಂ ಸಿ ಎ ತಂಡ ಮೃತ ಪಟ್ಟ ವರ್ಗೀಸ್ ಕುಟುಂಬಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನೀಡಲು ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಯಿಂದ ಸಹಾಯ ತಂಡವನ್ನು ರೆಜಿ ಜಾರ್ಜ್ ಪಡಂಗಡಿ ಇವರ ನೇತೃತ್ವ ದಲ್ಲಿ ರಚಿಸಲಾಯಿತು.

ಕೇರಳದ ಮನೆಯವರನ್ನು ಸಂಪರ್ಕಿಸಿ ಮೃತ ದೇಹದ ಗುರುತು ಹಾಗೂ ಊರಿಗೆ ದೇಹವನ್ನು ರವಾನಿಸುವ ವ್ಯವಸ್ಥೆಗೆ ಸಹಾಯ ಮಾಡಲಿದ್ದಾರೆ. ಭೇಟಿ ತಂಡದಲ್ಲಿ ನಿರ್ದೇಶಕರಾದ ವಂದನಿಯ ಫಾ. ಶಾಜಿ ಮಾತ್ಯು ಪಿ ಆರ್ ಓ ಸೇಬಾಷ್ಟಿಯನ್ ಪಿ ಸಿ. ಉಜಿರೆ ಘಟಕಾಧ್ಯಕ್ಷ ಜೋಬಿ, ಬೆಳ್ತಂಗಡಿ ವಲಯ ಅಧ್ಯಕ್ಷ ರೆಜಿ ಜಾರ್ಜ್ ಹಾಗೂ ವೇಣೂರಿನ ಕೆ ಎಸ್ ಎಂ ಸಿ ಎ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!