ವೇಣೂರು ಮಹಾಮಸ್ತಕಾಭಿಷೇಕಕ್ಕೆ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಆಹ್ವಾನ ಪತ್ರಿಕೆ

Suddi Udaya

ಬೆಳ್ತಂಗಡಿ: ಫೆಬ್ರವರಿ 22 ರಿಂದ ಮಾರ್ಚ್ 1ರವರೆಗೆ ನಡೆಯಲಿರುವ ವೇಣೂರಿನ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಅಳದಂಗಡಿ ಅರಸರು ಮೈಸೂರು ಅರಮನೆಗೆ ತೆರಳಿ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು ಮತ್ತು ಅವರ ಕುಟುಂಬಸ್ಥರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಅಳದಂಗಡಿ ಅರಸರಾದ ಡಾ.ಪದ್ಮಪ್ರಸಾದ್ ಅಜಿಲರು, ಅವರ ಧರ್ಮಪತ್ನಿ ಮಧುರಾ ಪದ್ಮಪ್ರಸಾದ್ ಅಜಿಲರು, ಸಹೋದರ ಶಿವಪ್ರಸಾದ್‌ ಅಜಿಲರು, ಅವರ ಪತ್ನಿ, ರೇಖಾ ಶಿವಪ್ರಸಾದ್ ಅಜಿಲರವರು ಮೈಸೂರು ಅರಮನೆಯಲ್ಲಿ ಆಮಂತ್ರಣ ನೀಡಿದರು. ಈ ವೇಳೆ ಯದುವೀರ್ ರನ್ನು ವಿಶೇಷವಾಗಿ ಗೌರವಿಸಲಾಯಿತು.

Leave a Comment

error: Content is protected !!