ಮರೋಡಿ: ಪಾಣಾಲು-ಉಚ್ಚೂರು ಸಂಪರ್ಕ ರಸ್ತೆಗೆ ದಾನಿಗಳಿಂದ ವೃತ್ತ ನಿರ್ಮಾಣ

Suddi Udaya

ಮರೋಡಿ: ಪಾಣಾಲು-ಉಚ್ಚೂರು ಕೂಡುರಸ್ತೆಯು ಮರೋಡಿ-ಬಜಿಲಪಾದೆ ಮತ್ತು ಮರೋಡಿ-ನಾರಾವಿ ಎಂಬ ಎರಡು ರಸ್ತೆಗಳನ್ನು ಸಂಪರ್ಕಿಸುವ ಏಕೈಕ ಪ್ರಮುಖವಾದ ರಸ್ತೆಯಾಗಿದೆ. ಈ ಕೂಡು ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಸುಮಾರು ಒಂದು ಎಕರೆಗಳಷ್ಟು ಬೆಲೆಬಾಳುವ ಜಮೀನನ್ನು ಪದ್ಮಕ್ಕ ಹೆಗ್ಗಡ್ತಿ ಮತ್ತು ಮಕ್ಕಳು, ಉಚ್ಚೂರು ಇವರು ಉದಾರವಾಗಿ ನೀಡಿರುತ್ತಾರೆ. ಅಲ್ಲದೇ ಪಾಣಾಲು ಎಂಬಲ್ಲಿ ಸುಮಾರು 30000/- ಅಂದಾಜು ವೆಚ್ಚದಲ್ಲಿ ಆಕರ್ಷಕವಾದ ವೃತ್ತ ನಿರ್ಮಾಣ ಮಾಡಿ, ರಸ್ತೆಯ ಮಾಹಿತಿಗಳುಳ್ಳ ನಾಮಫಲಕವನ್ನು ಪದ್ಮಕ್ಕ ಹೆಗ್ಗಡ್ತಿಯವರ ಪುತ್ರ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ದಿವಾಕರ ಹೆಗ್ಡೆ, ಮಯೂರ ಇವರು ಅಳವಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪದ್ಮಕ್ಕ ಹೆಗ್ಗಡ್ತಿ ಕುಟುಂಬವು ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡು, ಸಮಾಜಕ್ಕೆ ಮಾದರಿಯಾಗಿ, ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

Leave a Comment

error: Content is protected !!