25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮರೋಡಿ: ಪಾಣಾಲು-ಉಚ್ಚೂರು ಸಂಪರ್ಕ ರಸ್ತೆಗೆ ದಾನಿಗಳಿಂದ ವೃತ್ತ ನಿರ್ಮಾಣ

ಮರೋಡಿ: ಪಾಣಾಲು-ಉಚ್ಚೂರು ಕೂಡುರಸ್ತೆಯು ಮರೋಡಿ-ಬಜಿಲಪಾದೆ ಮತ್ತು ಮರೋಡಿ-ನಾರಾವಿ ಎಂಬ ಎರಡು ರಸ್ತೆಗಳನ್ನು ಸಂಪರ್ಕಿಸುವ ಏಕೈಕ ಪ್ರಮುಖವಾದ ರಸ್ತೆಯಾಗಿದೆ. ಈ ಕೂಡು ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಸುಮಾರು ಒಂದು ಎಕರೆಗಳಷ್ಟು ಬೆಲೆಬಾಳುವ ಜಮೀನನ್ನು ಪದ್ಮಕ್ಕ ಹೆಗ್ಗಡ್ತಿ ಮತ್ತು ಮಕ್ಕಳು, ಉಚ್ಚೂರು ಇವರು ಉದಾರವಾಗಿ ನೀಡಿರುತ್ತಾರೆ. ಅಲ್ಲದೇ ಪಾಣಾಲು ಎಂಬಲ್ಲಿ ಸುಮಾರು 30000/- ಅಂದಾಜು ವೆಚ್ಚದಲ್ಲಿ ಆಕರ್ಷಕವಾದ ವೃತ್ತ ನಿರ್ಮಾಣ ಮಾಡಿ, ರಸ್ತೆಯ ಮಾಹಿತಿಗಳುಳ್ಳ ನಾಮಫಲಕವನ್ನು ಪದ್ಮಕ್ಕ ಹೆಗ್ಗಡ್ತಿಯವರ ಪುತ್ರ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ದಿವಾಕರ ಹೆಗ್ಡೆ, ಮಯೂರ ಇವರು ಅಳವಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಪದ್ಮಕ್ಕ ಹೆಗ್ಗಡ್ತಿ ಕುಟುಂಬವು ಸಮಾಜಮುಖಿ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡು, ಸಮಾಜಕ್ಕೆ ಮಾದರಿಯಾಗಿ, ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

Related posts

ಮುಂಡಾಜೆ : ಶಿವಂ ಬೇಕರಿ ಮತ್ತು ಪ್ಲವರ್ ಡೆಕೋರೇಶನ್ ಶುಭಾರಂಭ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಬೆಳ್ತಂಗಡಿ ತಾ| ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Suddi Udaya

ಶ್ರೀ ದುರ್ಗಾ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ನಲ್ಲಿ ಖರೀದಿಗೆ ವಿಶೇಷ ಡಿಸ್ಕೌಂಟ್

Suddi Udaya

ಬೆಳ್ತಂಗಡಿ: ವಿವಿಧ ಸೇತುವೆ ರಚನೆ ಕಾಮಗಾರಿಗಳಿಗೆ ರೂ. 6 ಕೋಟಿ 25 ಲಕ್ಷ ಅನುದಾನ ಸರ್ಕಾರದಿಂದ ಮಂಜೂರು: ರಕ್ಷಿತ್ ಶಿವರಾಮ್

Suddi Udaya

ಬೆಳ್ತಂಗಡಿ ವಕೀಲರ ಭವನದಲ್ಲಿ ಹುಲಿ ವೇಷ ಪ್ರದರ್ಶನ

Suddi Udaya

ಅಳದಂಗಡಿ ಸರಸ್ವತಿ ಭಟ್ ಹೃದಯಾಘಾತದಿಂದ ನಿಧನ

Suddi Udaya
error: Content is protected !!