ಭಾರತೀಯ ಮಾಜ್ದೂರು ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆ

Suddi Udaya

ಬೆಳ್ತಂಗಡಿ: ಭಾರತೀಯ ಮಾಜ್ದೂರು ಸಂಘ ದ.ಕ ಜಿಲ್ಲೆ ಇದರ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಿತು.

ಸಭೆಯಲ್ಲಿ ಮಾರ್ಚ್ 1, 2, ಮತ್ತು 3ರಂದು ಬಳ್ಳಾರಿಯಲ್ಲಿ ನಡೆಯುವ ಭಾರತೀಯ ಮಾಜ್ದೂರು ಸಂಘ ಕರ್ನಾಟಕ ರಾಜ್ಯದ ತ್ರೈ ವಾರ್ಷಿಕ ಅಧಿವೇಶನದ ಪೋಸ್ಟರ್ ನ್ನು ರಾಜ್ಯ ಬಿ.ಎಂ.ಸ್ ನ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಹೆಚ್ ಎಲ್ ಬಿಡುಗಡೆ ಗೊಳಿಸಿ, ರಾಷ್ಟ್ರೀಯತೆಯನ್ನು ಕಾರ್ಮಿಕ ವಲಯದಲ್ಲಿ ಮೂಡಿಸುತ್ತಾ, ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿರುವ ಸಂಘಟನೆ ನಮ್ಮದ್ದು, ಇದರ ರಾಜ್ಯ ಅಧಿವೇಶನಕ್ಕೆ ತಾವುಗಳು ಬರಬೇಕು, ಇದರ ಸದುಪಯೋಗವನ್ನು ಪಡೆಯಬೇಕು ಎಂದು ಆಮಂತ್ರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಭಗವಾನದಾಸ್, ಕಾರ್ಯದರ್ಶಿ ಜಯರಾಜ್, ಜಿಲ್ಲಾಧ್ಯಕ್ಷರು ವಕೀಲರಾದ ಅನಿಲ್ ಕುಮಾರ್ ಯು, ಕಾರ್ಯದರ್ಶಿ ಗೋಪಾಲ ಕೃಷ್ಣ, ಹಿರಿಯ ಮುಖಂಡರಾದ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.

Leave a Comment

error: Content is protected !!