ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸೇವಾಭಾರತಿಗೆ ಅಂಬ್ಯುಲೆನ್ಸ್ ಕೊಡುಗೆ

Suddi Udaya

ಉಜಿರೆ: : ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್, ಮೈಸೂರು  ಇವರಿಂದ  2023-24 ನೇ ಸಾಲಿನ  ಸಿ. ಎಸ್. ಆರ್ ಅನುದಾನದಡಿಯಲ್ಲಿ  ಕನ್ಯಾಡಿಯ ಸೇವಾಭಾರತಿ ಸಂಸ್ಥೆಗೆ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ  ಫೆಬ್ರವರಿ 5 ರಂದು ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್  ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್  ಸಂಸ್ಥೆಯ  ಸೀನಿಯರ್ ಜನರಲ್ ಮ್ಯಾನೇಜರ್   ಕೆ. ನಾರಾಯಣನ್ ರವರು ಆಂಬುಲೆನ್ಸ್ ಕೀ ಯನ್ನು ಸೇವಾಭಾರತಿ  ಸಂಸ್ಥೆಯ ಸೀನಿಯರ್ ಮ್ಯಾನೇಜರ್  ಚರಣ್ ಕುಮಾರ್ ಎಂ ಇವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ  ಬ್ಯಾಂಕಿನ  ಸಿ. ಎಸ್. ಆರ್. ವಿಭಾಗದ ಜನರಲ್ ಮ್ಯಾನೇಜರ್   ಪ್ರಮೋದ್ ಕುಮಾರ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ ನ  ಹಿರಿಯ ಅಧಿಕಾರಿವರ್ಗದವರು, ಸೇವಾಭಾರತಿಯ ಸ್ವಯಂ ಸೇವಕ ಚಂದನ್ ಗುಡಿಗಾರ್ ಉಪಸ್ಥಿತರಿದ್ದರು.

ಸೇವಾ ಸಂಸ್ಥೆಗೆ ಕೊಡುಗೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ .ಲಿ. ಸಂಸ್ಥೆಗೆ  ಸೇವಾಭಾರತಿ ಪರವಾಗಿ  ಕೋಶಾಧಿಕಾರಿ ಕೆ.ವಿನಾಯಕ ರಾವ್ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Comment

error: Content is protected !!