ಕರಾಯ : ಆಟೋರಿಕ್ಷಾಕ್ಕೆ ಟಿಪ್ಪರ್‌ ಲಾರಿ ಡಿಕ್ಕಿ: ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಕರಾಯ ಗ್ರಾಮದ ಕಲ್ಲೇರಿ ಕ್ವಾಟ್ರಸ್‌ ಬಳಿ ಅರುಣ್‌ ಎಂಬುವವರು ಟಿಪ್ಪರ್‌ ಲಾರಿಯನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ಆಟೋರಿಕ್ಷಾದಲ್ಲಿದ್ದವರಿಗೆ ಗಾಯಗಳಾದ ಘಟನೆ ಫೆ.6 ರಂದು ನಡೆದಿದೆ.

ಪುತ್ತಿಲ ಗ್ರಾಮದ ಸುಜೀರ್‌ ಮಹಮ್ಮದ್‌ ಪೈಝಲ್‌ (38) ಎಂಬವರ ದೂರಿನಂತೆ, ಫೆ 06 ರಂದು ಮಧ್ಯಾಹ್ನ ಆರೋಪಿ ಟಿಪ್ಪರ್‌ ಲಾರಿ ಚಾಲಕ ಅರುಣ್‌ ಎಂಬವರು, KA-21-C-3149 ನೇ ನೋಂದಣಿ ನಂಬ್ರದ ಟಿಪ್ಪರ್‌ ಲಾರಿಯನ್ನು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಕ್ವಾಟ್ರಸ್‌ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಅಬ್ಬಾಸ್ ಎಂಬವರು ಚಾಲಕರಾಗಿ ಅಶ್ರಫ್‌ ಕಲ್ಲೇರಿ, ಅನ್ನತ್‌ ಬೀಬಿ ಹಾಗೂ ಮಹಮ್ಮದ್‌ ನೌಮಾನ್‌ (3.5ವರ್ಷ) ಎಂಬವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಚಲಾಯಿಸಿಕೊಂಡು ಬರುತ್ತಿದ್ದ KA-21-B-9922 ನೇ ನೋಂದಣಿ ನಂಬ್ರದ ಆಟೋರಿಕ್ಷಾಕ್ಕೆ ಅಪಘಾತವಾಗಿರುತ್ತದೆ. ಪರಿಣಾಮ ಆಟೋರಿಕ್ಷಾದಲ್ಲಿದ್ದ ಅಶ್ರಫ್‌ ಕಲ್ಲೇರಿ ರವರಿಗೆ, ಅನ್ನತ್‌ ಬೀಬಿ ಮತ್ತು ನೌಮಾನ್‌ ರವರಿಗೆ ರಕ್ತಗಾಯಗಳಾಗಿದ್ದು, ಆಟೋರಿಕ್ಷಾದ ಚಾಲಕ ಅಬ್ಬಾಸ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ, ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಸಂಖ್ಯೆ: 17/2024 ಕಲಂ: 279, 337 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Comment

error: Content is protected !!