22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕರಾಯ : ಆಟೋರಿಕ್ಷಾಕ್ಕೆ ಟಿಪ್ಪರ್‌ ಲಾರಿ ಡಿಕ್ಕಿ: ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಕರಾಯ ಗ್ರಾಮದ ಕಲ್ಲೇರಿ ಕ್ವಾಟ್ರಸ್‌ ಬಳಿ ಅರುಣ್‌ ಎಂಬುವವರು ಟಿಪ್ಪರ್‌ ಲಾರಿಯನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ಆಟೋರಿಕ್ಷಾದಲ್ಲಿದ್ದವರಿಗೆ ಗಾಯಗಳಾದ ಘಟನೆ ಫೆ.6 ರಂದು ನಡೆದಿದೆ.

ಪುತ್ತಿಲ ಗ್ರಾಮದ ಸುಜೀರ್‌ ಮಹಮ್ಮದ್‌ ಪೈಝಲ್‌ (38) ಎಂಬವರ ದೂರಿನಂತೆ, ಫೆ 06 ರಂದು ಮಧ್ಯಾಹ್ನ ಆರೋಪಿ ಟಿಪ್ಪರ್‌ ಲಾರಿ ಚಾಲಕ ಅರುಣ್‌ ಎಂಬವರು, KA-21-C-3149 ನೇ ನೋಂದಣಿ ನಂಬ್ರದ ಟಿಪ್ಪರ್‌ ಲಾರಿಯನ್ನು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಕ್ವಾಟ್ರಸ್‌ ಬಳಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಅಬ್ಬಾಸ್ ಎಂಬವರು ಚಾಲಕರಾಗಿ ಅಶ್ರಫ್‌ ಕಲ್ಲೇರಿ, ಅನ್ನತ್‌ ಬೀಬಿ ಹಾಗೂ ಮಹಮ್ಮದ್‌ ನೌಮಾನ್‌ (3.5ವರ್ಷ) ಎಂಬವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಚಲಾಯಿಸಿಕೊಂಡು ಬರುತ್ತಿದ್ದ KA-21-B-9922 ನೇ ನೋಂದಣಿ ನಂಬ್ರದ ಆಟೋರಿಕ್ಷಾಕ್ಕೆ ಅಪಘಾತವಾಗಿರುತ್ತದೆ. ಪರಿಣಾಮ ಆಟೋರಿಕ್ಷಾದಲ್ಲಿದ್ದ ಅಶ್ರಫ್‌ ಕಲ್ಲೇರಿ ರವರಿಗೆ, ಅನ್ನತ್‌ ಬೀಬಿ ಮತ್ತು ನೌಮಾನ್‌ ರವರಿಗೆ ರಕ್ತಗಾಯಗಳಾಗಿದ್ದು, ಆಟೋರಿಕ್ಷಾದ ಚಾಲಕ ಅಬ್ಬಾಸ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ, ಪುತ್ತೂರು ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಸಂಖ್ಯೆ: 17/2024 ಕಲಂ: 279, 337 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ನ.24: ಕಾಶಿಬೆಟ್ಟು ಅರಳಿ ಅಲ್ಯೋಟ್ಟು ಮನೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಉಜಿರೆ: 1ವರ್ಷ 8 ತಿಂಗಳಿನ ವೇದ್ಯ ಶ್ರೀಶಾಸ್ತ ರವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್

Suddi Udaya

ಆ 9-15 ಬೆಳ್ತಂಗಡಿಯಲ್ಲಿ ಶ್ರೀಮದ್ ಭಾಗವತ ಪ್ರವಚನ ಸಪ್ತಾಹ,

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಸತ್ಸಂಗ”

Suddi Udaya

ಪಣಕಜೆ ಹೆದ್ದಾರಿಯಲ್ಲಿ ವಿದ್ಯುತ್ ವಯರ್ ಗೆ ಜೆಸಿಬಿ ತಾಗಿ ವಾಹನ ಸಂಚಾರ ಕ್ಕೆ ಆಡಚಣೆ

Suddi Udaya

ಮಚ್ಚಿನ ಪೈಯೊಟ್ಟುನಲ್ಲಿ ಜೋಪಡಿಯಲ್ಲಿ ಬಡ ಕುಟುಂಬ: ಸೋರುವ ಸೂರಿನಡಿ ತಾಯಿ, ಮಗಳ ಸಂಕಷ್ಟದ ಜೀವನ

Suddi Udaya
error: Content is protected !!