ಸೌತಡ್ಕದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ

Suddi Udaya

ಕೊಕ್ಕಡ: ಪ್ರಸಿದ್ಧ ಶ್ರದ್ಧಾ ಕೇಂದ್ರ , ಯಾತ್ರಾ ಸ್ಥಳವಾದ ಸೌತಡ್ಕದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯು ಶುಭಾರಂಭಗೊಂಡಿತು.

ಬೆಳ್ತಂಗಡಿ ಯಲ್ ಐ ಸಿ ಅಭಿವೃದ್ಧಿ ಅಧಿಕಾರಿ ಉದಯ ಶಂಕರ್ ಕೆ ದೀಪ ಬೆಳಗಿಸಿ ಶುಭ ಹಾರೈಸಿದರು.

ಅರಸಿನಮಕ್ಕಿ ಗ್ರಾ ಪಂ ಉಪಾಧ್ಯಕ್ಷ ಸುಧೀರ್ ಕುಮಾರ್, ಗಣೇಶ್ ಕೆ ಹೊಸ್ತೋಟ, ಧರ್ಮಸ್ಥಳ ಬಿ ಜೆ ಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಕರುಣಾಕರ ಶಿಶಿಲ, ನಿವೃತ್ತ ಯೋಧ ಸುಭೇದಾರ್ ಮೇಜರ್ ಮಹಾಬಲ,ಗ್ರಾ ಪಂ ಸದಸ್ಯ ಪ್ರೇಮಚಂದ್ರ , ಸುಂದರ ರಾಣ್ಯ, ಕೃಷ್ಣಪ್ಪ ಗೌಡ ಪಡ್ಡಯಿಬೆಟ್ಟು ಹಾಗೂ ಮನೆಯವರು, ಹತ್ಯಡ್ಕ ಸಿ ಎ ಬ್ಯಾಂಕ್ ನಿರ್ದೇಶಕ ಮುರಳಿ ಶೆಟ್ಟಿಗಾರ್, ಶಿಶಿಲ ಗ್ರಾ ಪಂ ಅಧ್ಯಕ್ಷ ಸುಧೀನ್, ಹಿತೈಷಿಗಳು ಉಪಸ್ಥಿತರಿದ್ದರು.

ಮಳಿಗೆಯ ಮಾಲಕ ಸುದರ್ಶನ ಗೌಡ ಎಲ್ಲರನ್ನು ಸ್ವಾಗತಿಸಿ ಉದ್ಯಮಕ್ಕೆ ಎಲ್ಲರ ಬೆಂಬಲ ಕೋರಿದರು.

ಮಳಿಗೆಯಲ್ಲಿ ಕೆಎಂಎಫ್ ನಂದಿನಿ ಪ್ರಸಿದ್ಧ ಉತ್ಪನ್ನಗಳಾದ ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಮೈಸೂರಪಾಕ್, ಐಸ್ ಕ್ರೀಮ್ ಮೊದಲಾದವು ಲಭ್ಯವಿದ್ದು ಶ್ರೀ ಕ್ಷೇತ್ರ ಕ್ಕೆ ಬರುವ ಭಕ್ತಾದಿಗಳ ಮನ ತಣಿಸಲಿವೆ.

Leave a Comment

error: Content is protected !!