24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ನಿಂದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಕಂಬಳದ ನಂದಳಿಕೆಯ ಪಾಂಡು ಕೋಣಕ್ಕೆ ಗೌರವಾರ್ಪಣೆ

ವೇಣೂರು: ಇಲ್ಲಿಯ ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮತ್ತು ತಾಲೂಕು ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ 3ನೇ ವರ್ಷದ 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಫೆ.10 ರಂದು ಗುಂಡೂರಿ ತುಂಬೆದಲೆಕ್ಕಿ ಶ್ರೀ ಸತ್ಯ ನಾರಾಯಣ ಭಜನಾ ಮಂದಿರದ ಸಮೀಪ ನಡೆಯಿತು.

ಕಾರ್ಯಕ್ರಮವನ್ನು ಲಕ್ಷ್ಮಿ ನಾರಾಯಣ ಅಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.

ಅಧ್ಯಕ್ಷತೆಯನ್ನು ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ಕುಮಾರ್ ಪಾದೆಗುರಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ರಮೇಶ್ ಪಡ್ಡಾಯಿಮಜಲು, ಶ್ರೀಕಾಂತ್ ಭಟ್ ನಂದಳಿಕೆ, ಪ್ರಮುಖರಾದ ಜಯಂತ್ ಕೋಟ್ಯಾನ್, ಹರೀಶ್ ಪೊಕ್ಕಿ, ವಿಜಯ್ ಗೌಡ,ಲೋಕೇಶ್ ಕೊರ್ಲೋಡಿ, ನವೀನ್ ಪಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.

ಕಂಬಳದ ಕೋಣಕ್ಕೆ ಹಾಗೂ ಸಾಧಕರಿಗೆ ಸನ್ಮಾನ; ಕಾರ್ಯಕ್ರಮದಲ್ಲಿ ಗುಂಡೂರಿ ಗ್ರಾಮದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು, ಯುನಿರ್ವಸಿಟಿ ಗೋಲ್ಡ್ ಮೆಡಲಿಸ್ಟ್ ಕಬಡ್ಡಿ ಆಟಗಾರರಾದ ಸುಶಾಂತ್ ಶೆಟ್ಟಿ ಗರ್ಡಾಡಿ, ಪ್ರಜ್ವಲ್ ಶಿವಮೊಗ್ಗ , ಶಶಾಂಕ್ ಕುಮಾರ್, ಹೊನ್ನಯ್ಯ ಗುಂಡೂರಿ ಹಾಗೂ ಕಂಬಳದ ನಂದಳಿಕೆಯ ಪಾಂಡು ಕೋಣಕ್ಕೆ ಗೌರವಾರ್ಪಣೆ ನಡೆಯಿತು.

ಉಪಾಧ್ಯಕ್ಷ ನಿತೀಶ್ ಗುಂಡೂರಿ ಹಾಗೂ ಸಮಿತಿ ಸದಸ್ಯರು ಸಹಕರಿಸಿದರು. ಕಾರ್ಯದರ್ಶಿ ದಯಾನಂದ ಗುಂಡೂರಿ ಪ್ರಾಸ್ತಾವಿಕ ಮಾತನಾಡಿದರು. ಸುಧಾಕರ ಭಟ್ ಸ್ವಾಗತಿಸಿದರು.

Related posts

ರಾಜ್ಯಮಟ್ಟದ ಕರಾಟೆಯಲ್ಲಿ ಸಾನ್ವಿ ಎಸ್ ಕೋಟ್ಯಾನ್ ರವರಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಮೈಲಿ ವರ್ಲ್ಡ್ ಮಕ್ಕಳ ಪಾಕ್೯ ಉದ್ಘಾಟನೆ

Suddi Udaya

ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಕಳೆಂಜ ಬಿ ಕಾರ್ಯಕ್ಷೇತ್ರದ ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಉಜಿರೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Suddi Udaya

ಶಿಬಾಜೆ ಸುರಕ್ಷಿತಾರಣ್ಯದ ಪಡಂತಾಜೆ ರಸ್ತೆ ಬದಿ 6 ತಿಂಗಳ ಪ್ರಾಯದ ಚಿರತೆ ಮರಿಯ ಶವ ಪತ್ತೆ

Suddi Udaya

ರಾಜ್ಯ ಮಟ್ಟದ ಕ್ರೀಡಾಕೂಟದ ಗುಂಡೆಸತ ಸ್ಪರ್ಧೆ: ಬೆಳಾಲು ಶ್ರೀ ಧ. ಮಂ. ಪ್ರೌಢಶಾಲೆಯ ಕು.ಜಾಹ್ನವಿ ಪ್ರಥಮ

Suddi Udaya
error: Content is protected !!