ಕೊಕ್ಕಡ ಗ್ರಾ.ಪಂ. ಸಂಗಮ ಸಂಜೀವಿನಿ ಒಕ್ಕೂಟದಿಂದ ಚಿಕಿತ್ಸಾ ನೆರವು

Suddi Udaya

ಕೊಕ್ಕಡ : ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೊಕ್ಕಡ ಇದರ ವ್ಯಾಪ್ತಿಗೊಳಪಟ್ಟ ಸಂಘವಾದ ಶ್ರೀ ದುರ್ಗಾ ಸಂಜೀವಿನಿ ಓಣಿತ್ತಾರು ಇದರ ಸದಸ್ಯೆಯಾದ ಶ್ರೀಮತಿ ಕವಿತಾ ಇವರ ಕ್ಯಾನ್ಸರ್ ಪೀಡಿತ ಮಗುವಿಗೆ, ಒಕ್ಕೂಟದ ನೇತೃತ್ವದಲ್ಲಿ ಎಲ್ಲಾ ಸಂಜೀವಿನಿ ಸಂಘಗಳು, ಮತ್ತು ಡಿ.ಕೆಆರ್.ಡಿ.ಎಸ್ ಸಂಘ ದಿಂದ ಸಂಗ್ರಹಿಸಿದ ಮೊತ್ತವನ್ನು ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟ ದ ಅಧ್ಯಕ್ಷ ರಾದ ಕುಸುಮ, ಕಾರ್ಯದರ್ಶಿ ಹೇಮಾವತಿ, ವಲಯ ಮೇಲ್ವಿಚಾರಕರಾದ ವೀಣಾಶ್ರೀ ಮೇಡಂ, ಕೋಶಾಧಿಕಾರಿ, ನಳಿನಿ, ಸಂಗಮ ಹಾಳೆತಟ್ಟೆ ಉತ್ಪಾದಕ ಘಟಕದ ಅಧ್ಯಕ್ಷರಾದ ಅಶ್ವಿನಿ, ಎಮ್.ಬಿ.ಕೆ, ಎಲ್.ಸಿಆರ್.ಪಿ, ಹಾಗೂ ಸಂಘದ ಸದ್ಯಸರು ಉಪಸ್ಥಿತರಿದ್ದರು.

Leave a Comment

error: Content is protected !!