September 6, 2026
ರಾಜ್ಯ ಸುದ್ದಿ

ಜೈನ ಧರ್ಮದ ಯುಗ ಪ್ರವರ್ತಕ : ಆಚಾರ್ಯಶ್ರೀ ೧೦೮ ಶ್ರೀ ವಿದ್ಯಾಸಾಗರ ಮುನಿ ಮಹಾರಾಜರು ಜಿನೈಕ್ಯ

ಬೆಳ್ತಂಗಡಿ: ಜೈನ ಧರ್ಮದ ಯುಗ ಪ್ರವರ್ತಕ , ಚರ್ಯಾ ಶಿರೋಮಣಿ , ಆಗಮ‌ಪ್ರಣೇತ , ನಿಜವಾದ ದೇವ, ಗುರು , ಶಾಸ್ತ್ರಗಳ ಆರಾಧಕ , ಸಮಿಚೀನ ಧರ್ಮದ ಪ್ರವರ್ತಕ ಆಚಾರ್ಯಶ್ರೀ ೧೦೮ ಶ್ರೀ ವಿದ್ಯಾಸಾಗರ ಮುನಿ ಮಹಾರಾಜರು ಇಂದು ಸಮಾಧಿಯಾಗಿರುತ್ತಾರೆ.

ಮಹಾಮಹಿಮ ಪೂಜ್ಯರು ಜೈನ ಸಮಾಜಕ್ಕೆ ಅದರಲ್ಲೂ ದಿಗಂಬರ ಅಮ್ನಾಯದ ಭವ್ಯ ಪರಂಪರೆಯ ದ್ಯೋತಕವಾಗಿ ಚರ್ಯೆಯನ್ನು ಆಚರಿಸುತ್ತಾ ಭಗವಾನ್ ಮಹಾವೀರರ ಶಾಸನಕ್ಕೆ ಭಕ್ತಿಯನ್ನು ಪೇರಿಸಿ ಸಕಲರಿಗೂ

ಪೂಜ್ಯರಾಗಿದ್ದರು. ಅನೇಕಾನೇಕ ಭವ್ಯ ಜಿನಮಂದಿರಗಳ ಪ್ರವರ್ಧಮಾನಕ್ಕೆ ನಿಮಿತ್ತರಾಗಿದ್ದ ಆಚಾರ್ಯಶ್ರೀಯವರು ಭವ್ಯ ಶಿಷ್ಯ ಪರಂಪರೆಯನ್ನು ದೇಶದಾದ್ಯಂತ ಪಸರಿಸಿ ಜೈನ ಧರ್ಮಕ್ಕೆ ಶಿರೋಮಣಿಯಾಗಿದ್ದರು.

ಆಚಾರ್ಯಶ್ರೀಯವರ ಜನ್ಮವು ಕರ್ನಾಟಕದ ಬೆಳಗಾವಿಯಲ್ಲಿ ಆಗಿತ್ತು. ಇದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಆಚಾರ್ಯಶ್ರೀಯವರ ಭವ್ಯ ಚೇತನದ ಅಗಲುವಿಕೆಯಿಂದ ಜೈನ ಧರ್ಮಕ್ಕೆ ಅಪಾರ ನಷ್ಟವಾಗಿದೆ. ಆಚಾರ್ಯಶ್ರೀಯವರ ಉನ್ನತ ತತ್ವ ಆದರ್ಶಗಳು ಜಗತ್ತಿನ ಎಲ್ಲಡೆ ಪಸರಿಸಲಿ ಹಾಗೂ ಜೈನ ಧರ್ಮಕ್ಕೆ ನಿತ್ಯ ಪ್ರಭೆಯು ಅನುರಣಿಸುತ್ತಿರಲಿ ಎಂದು ಆಚಾರ್ಯಶ್ರೀಯವರ ಭವ್ಯಾತ್ಮಕ್ಕೆ ಭಕ್ತಿಪೂರ್ವಕ ನಮನಗಳನ್ನು ವಿನಯಾಂಜಲಿಯನ್ನು ಅರ್ಪಿಸುತ್ತೇನೆ

ನಿರಂಜನ್ ಜೈನ್ ಕುದ್ಯಾಡಿ

Related posts

ದ್ವೇಷ ಭಾಷಣ ಪ್ರಕರಣ; ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿರೀಕ್ಷಣಾ ಜಾಮೀನು ಮಂಜೂರು

Suddi Udaya

ಖೋಟಾನೋಟು ಪತ್ತೆ ಪ್ರಕರಣ: ಗುರುವಾಯನಕೆರೆ ಅಪಾರ್ಟ್ಮೆಂಟ್ ಮೇಲೆ ಪೊಲೀಸ್ ದಾಳಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ. ಸಾಹಿತ್ಯ ಸಮ್ಮೇಳನ : ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ 92ನೇ ಅಧಿವೇಶನ ಉದ್ಘಾಟಿಸಿದ ಶತಾವಧಾನಿ ಡಾ.ರಾ.ಗಣೇಶ್

Suddi Udaya

ಉಜಿರೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆ : ಕೆ.ಪಿ.ಸಿ.ಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ಭಾಗಿ

Suddi Udaya

ಜೇನು ಕುಟುಂಬಕ್ಕಾಗಿ ಕಾಡಿಗೆ ತೆರಳಿದ್ದ ಅಣ್ಣ ಸಂತೋಷ್‌ಗೆ ಕಚ್ಚಿದ ಹಾವು: ಬಾಯಿಯಿಂದ ವಿಷ ಹೀರಿ ಅಣ್ಣನ ಜೀವ ಉಳಿಸಿದ ತಮ್ಮ ಗಣೇಶ್

Suddi Udaya

ಜಿಲ್ಲೆಯಾಧ್ಯಂತ ಸಂಚರಿಸಲಿರುವ “ವಿಜಯ ಸಂಕಲ್ಪ ಯಾತ್ರೆ” : ಬೆಳ್ತಂಗಡಿ ಶ್ರೀ ಕುತ್ಯಾರು ದೇವಸ್ಥಾನ ಬಳಿಯಿಂದ ಲಾಯಿಲಾದ ವರೆಗೆ ಬೃಹತ್ ರೋಡ್ ಶೋ ಹಾಗೂ ಬೈಕ್ ಜಾಥಾ

Suddi Udaya
error: Content is protected !!