July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಉಜಿರೆ ಕಾಲೇಜು ವಿದ್ಯಾರ್ಥಿ ವರ್ಷಿತ್ ಹೆಚ್.ಎಂ. ನಾಪತ್ತೆ

ಉಜಿರೆ: ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ವರ್ಷಿತ್ ಹೆಚ್ ಎಂ(19) ಫೆ.16 ರಿಂದ ಕಾಣೆಯಾಗಿದ್ದು ಮಗನನ್ನು ಹುಡುಕಿ ಕೊಡುವಂತೆ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವರ್ಷಿತ್ ಹೆಚ್ ಎಂ ಉಜಿರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಬಿಸಿಎ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಉಜಿರೆಯ ಖಾಸಗಿ ಪಿಜಿಯಲ್ಲಿ ಉಳಿದುಕೊಂಡಿದ್ದರು.

ಫೆ.16 ರಂದು ಬೆಳಾಲು ಆರಿಕೋಡಿಯಿಂದ ಉಜಿರೆಗೆ ಬಂದು ಆತನ ಅಜ್ಜ, ಅಜ್ಜಿಯನ್ನು ಉಜಿರೆಯಿಂದ ಚಿಕ್ಕಮಮಗಳೂರಿಗೆ ತೆರಳುವ ಬಸ್ಸಿಗೆ ಹತ್ತಿಸಿ ತಾನು ಪಿಜಿಗೆ ಹೋಗುವುದಾಗಿ ಹೇಳಿದ್ದಾನೆ.

ಬಳಿಕ ತಾಯಿ ದೂರವಾಣಿ ಕರೆಮಾಡಿದ್ದು ವರ್ಷಿತ್ ನ ಮೊಬೈಲ್‌ ಸ್ವೀಚ್ ಆಫ್ ಆಗಿತ್ತು. ಈ ಬಗ್ಗೆ ಪಿಜಿ ಗೆ ಪೋನ್ ಮಾಡಿ ವಿಚಾರಿಸಿದಾಗ ಪಿಜಿಗೆ ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ನಂತರ ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಲಾಗಿದ್ದು ಆದರೆ ವರ್ಷಿತ್ ಹೆಚ್ ಎಂ ಎಲ್ಲಿಯೂ ಪತ್ತೆಯಾಗಿಲ್ಲ.

ಕಾಣೆಯಾದ ಮಗನನ್ನು ಪತ್ತೆ ಮಾಡಿಕೊಡಬೇಕಾಗಿ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ ಮನವಿ ಮಾಡಿದ್ದಾರೆ.

Related posts

ಮುಗೇರಡ್ಕ ನೆಕ್ಕರಾಜೆ ನಿವಾಸಿ ವಿಶ್ವನಾಥ್ ಗೌಡ ನಿಧನ

Suddi Udaya

ಪುತ್ತೂರಿನ ವಿವೇಕಾನಂದ ಪ.ಪೂ. ಕಾಲೇಜಿಗೆ ಅತ್ಯಧಿಕ ರ‍್ಯಾಂಕ್‌ಗಳು

Suddi Udaya

ಖೋಖೋ ಪಂದ್ಯಾಟ: ಮುಂಡಾಜೆ ಶಾಲಾ ಶಿಕ್ಷಕಿ ಮಂಜುಳಾ ಹೆಚ್ ಹಾಗೂ ಕೊಕ್ಕಡ ಶಾಲಾ ಶಿಕ್ಷಕಿ ನೇತ್ರಾವತಿ ಎ.ಎಸ್ ರವರು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಾರ್ಯದ ಕಲ್ಲಾಜೆಯ ನಿವಾಸಿ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ

Suddi Udaya

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಚರ್ಚ್ ಶಾಲೆಯ ವಿದ್ಯಾರ್ಥಿ ಪ್ರೇಕ್ಷಿತ್ ತೃತೀಯ ಸ್ಥಾನ

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya
error: Content is protected !!