ಜೆ ಸಿ ಐ ಕೊಕ್ಕಡ ಕಪಿಲ ಘಟಕದಿಂದ ಎಲ್.ಡಿ.ಎಂ.ಟಿ. ಯ ತರಬೇತಿ

Suddi Udaya

ಕೊಕ್ಕಡ: ಜೆ ಸಿ ಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಜೆ ಸಿ ಐ ನ ಸದಸ್ಯರಿಗೆ ಆಡಳಿತಾತ್ಮಕ ತರಬೇತಿ ಕಾರ್ಯಕ್ರಮವನ್ನು ಜೆ ಸಿ ಐ ನ ವಲಯದ ಉಪಾಧ್ಯಕ್ಷ ಜೆಸಿ ಜೆ ಎಫ್ ಎಂ ಶಂಕರ್ ರಾವ್ ನಡೆಸಿಕೊಟ್ಟರು.


ವೇದಿಕೆಯಲ್ಲಿ ಜೆ ಸಿ ಐ ನ ಅಧ್ಯಕ್ಷರಾದ ಜೆ ಸಿ ಎಚ್ ಜಿ ಎಫ್ ಸಂತೋಷ್ ಜೈನ್, ಯೋಜನಾ ನಿರ್ದೇಶಕರಾದ ಜೆ ಸಿ ಜೆ ಎಫ್ ಮ್ ಕೆ ಶ್ರೀಧರ್ ರಾವ್, ವಲಯದ ಉಪಾಧ್ಯಕ್ಷರಾದ ಜೆಸಿ ಜೆ ಎಫ್ ಮ್ ಶಂಕರ್ ರಾವ್, ಕಾರ್ಯದರ್ಶಿ ಜೆ ಸಿ ಅಕ್ಷತ್ ರೈ, ಲೇಡಿ ಜೆಸಿ ಅಧ್ಯಕ್ಷರಾದ ಜೆಸಿ ಶೋಭಾ ಪಿ., ಜೂನಿಯರ್ ಜೆಸಿ ಅಧ್ಯಕ್ಷರಾದ ಜೆಸಿ ಹರ್ಷಿತ್ ಗೌಡ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಜೆ ಸಿ ಐ ನ ಕೋಶಾಧಿಕಾರಿ ಜೆಸಿ ವಿದ್ಯೆಂದ್ರ ಯಸ್, ಉಪಾಧ್ಯಕ್ಷರಾದ ಜೆಸಿ ಪಿ ಟಿ ಸೆಬಸ್ಟಿನ್, ಜೆ ಸಿ ಎಚ್ ಜಿ ಎಫ್ ಜೋಸೆಫ್ ಪಿರೇರ, ಜೆ ಸಿ ವಿಜಯಚಂದ್ರ ಬಲ್ಕಾಜೆ, ಜೆ ಸಿ ವಿನ್ಸೆಂಟ್ ಸುವಾರಿಸ್, ಪಂಚಾಯತ್ ಸದಸ್ಯರು ಟಿ ಎಸ್ ನಿತ್ಯಾನಂದ ರೈ, ಅರಣ್ಯ ಸಮಿತಿ ಅಧ್ಯಕ್ಷರು ಧನಂಜಯ ಗೌಡ, ಕ್ರೀಡಾ ಸಮಿತಿ ಅಧ್ಯಕ್ಷರು ಹರೀಶ್ ಗೌಡ, ಪ್ರಗತಿಪರ ಕೃಷಿಕರು ಬಾಬುಗೌಡ ಹಾಗೂ ಸದಸ್ಯರು ಮತ್ತು ವಿದ್ಯಾರ್ಥಿ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಕಾರ್ಯಕ್ರಮವನ್ನು ಜೆಸಿ ಎಚ್‌ ಜಿ ಎಫ್ ಜೋಸೆಫ್ ಪಿರೇರ ನಿರೂಪಿಸಿದ್ದರು. ಶಂಕರ್ ರಾವ್ ಅವರ ಪರಿಚಯವನ್ನು ಜೆಸಿ ಹರ್ಷಿತ್ ಗೌಡ ತಿಳಿಸಿದರು. ಪ್ರಿಯ ಜೆ ಅಮೀನ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಜೆಸಿವಾಣಿಯನ್ನು ಚಂದನ ಜೈನ್, ಸ್ವಾಗತ ಜೆ ಸಿ ಎಚ್ ಜಿ ಎಫ್ ಸಂತೋಷ್ ಜೈನ್, ಜೆಸಿ ಅಕ್ಷತ್ ರೈ ಕಾರ್ಯಕ್ರಮವನ್ನು ವಂದಿಸಿದರು.

Leave a Comment

error: Content is protected !!