ಮಾ.10: ಮೂಲ್ಕಿಯಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ “ಬೆಳ್ಳಿ ಹಬ್ಬ ಸಂಭ್ರಮ”: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು,ಓಡಿಲ್ನಾಳ ಗ್ರಾಮ ಸಮಿತಿಯಿಂದ ಸಮಾಲೋಚನೆ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕುವೆಟ್ಟು: ರಾಷ್ಠೀಯ ಬಿಲ್ಲವ ಮಹಾಮಂಡಲ (ರಿ) ಮುಲ್ಕಿ ಮಾ.10 ರಂದು ಜರಗುವ ಬೆಳ್ಳಿ ಹಬ್ಬ ಸಂಭ್ರಮದ ಬಗ್ಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು ಓಡಿಲ್ನಾಳ ಗ್ರಾಮ ಸಮಿತಿ ಬೆಳ್ಳಿ ಹಬ್ಬ ಸಂಭ್ರಮದಲ್ಲಿ ಭಾಗವಹಿಸುವುದರ ಸಮಾಲೋಚನೆ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ 20 ರಂದು ಕುವೆಟ್ಟು ಗುತ್ತು ಮನೆಯಲ್ಲಿ ಜರಗಿತು.

ಸಭೆಯಲ್ಲಿ ಬೆಳ್ಳಿ ಹಬ್ಬ ಸಂಭ್ರಮದ ಸಂಚಾಲಕ ಯೋಗಿಶ್ ಕುಮಾರ್ ನಡಕ್ಕರ, ಬೆಳ್ತಂಗಡಿ ತಾಲೂಕು ಸಂಚಾಲಕಿ ಶಾಂತಾ ಜೆ ಬಂಗೇರ, ಬಿಲ್ಲವ ಮಹಾಮಂಡಲದ ಮಾಜಿ ಉಪಾಧ್ಯಕ್ಷ ಶ್ರೀಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿ ಅಧ್ಯಕ್ಷ ಪಿತಾಂಬರ ಹೇರಾಜೆ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಜಯರಾಮ್ ಬಂಗೇರ ಬೆಳ್ತಂಗಡಿ, ನಿರ್ದೇಶಕ ಅನೂಪ್ ಬಂಗೇರ ಮದ್ದಡ್ಕ, ಕುವೆಟ್ಟು ಬಿಲ್ಲವ ಸಂಘದ ಗೌರವಾಧ್ಯಕ್ಷ ಸತೀಶ್ ಬಂಗೇರ ಕುವೆಟ್ಟು, ನಿಯೋಜಿತ ಅಧ್ಯಕ್ಷ ನಾಗೇಶ್ ಅದೇಲು, ಮಹಿಳಾ ಬಿಲ್ಲವ ಅಧ್ಯಕ್ಷೆ ಜಯಂತಿ ಜಾಲಿಯರಡ್ಡ, ನಿಯೋಜಿತ ಅಧ್ಯಕ್ಷೆ ಲಲಿತಾ ಕೇದಳಿಕೆ, ಹಿರಿಯರಾದ ದಾಮೋದರ್ ಕುಂದರ್ ಸಬರಬೈಲು, ಚಂದ್ರಹಾಸ್ ಕೇದೆ, ಜಗದೀಶ್ ಬಂಗೇರ ಕುವೆಟ್ಟು, ಕುವೆಟ್ಟು ಬಿಲ್ಲವ ಸಂಘದ ಪಧಾದಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಉಮೇಶ್ ಮದ್ದಡ್ಕ ಸ್ವಾಗತಿಸಿದರು. ವಿನೋದಿನಿ ರಾಮಪ್ಪ ಧನ್ಯವಾದವಿತ್ತರು.

Leave a Comment

error: Content is protected !!