ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮುಂಡಾಜೆ ಶಾಲಾ ವಿದ್ಯಾರ್ಥಿಗಳಾದ ಚಿನ್ಮಯಿ, ಸಮೃದ್ಧಿರವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

Suddi Udaya

ಮುಂಡಾಜೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮಂಗಳೂರಿನ ಪಿಲಿಕುಲದಲ್ಲಿ ನಡೆದ ಬುಲ್ ಬುಲ್ ಚತುರ್ಥ ಚರಣ (ಹೀರಕ್ಗರಿ) ಪರೀಕ್ಷೆಯಲ್ಲಿ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ, ಮುಂಡಾಜೆಯ 5ನೇ ತರಗತಿ ವಿದ್ಯಾರ್ಥಿನಿಯಾದ ಚಿನ್ಮಯಿ ಮತ್ತು ಸ. ಹಿ. ಪ್ರಾ. ಶಾಲೆ, ಮುಂಡಾಜೆಯ 7ನೇ ತರಗತಿ ವಿದ್ಯಾರ್ಥಿನಿಯಾದ ಸಮೃದ್ಧಿ ಈ ಇಬ್ಬರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರು ರಾಜ ಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರವರು ನೆರವೇರಿಸಿದರು. ಇವರಿಗೆ ಬುಲ್ ಬುಲ್ ವಿಭಾಗ ಶಿಕ್ಷಕಿ ಸೇವಂತಿ ಬಿ. (Pre. ALT Bulbul) ರವರು ಮಾರ್ಗದರ್ಶನ ನೀಡಿರುತ್ತಾರೆ.
ಚಿನ್ಮಯಿ ಇವರು ಕಾನರ್ಪ ಕಡಿರುದ್ಯಾವರದ ಲತಾ ಮತ್ತು ಕಿರಣ್ ರವರ ಪುತ್ರಿ ಮತ್ತು ಸಮೃದ್ಧಿ ಇವರು ಎರ್ಮಾಳ್ ಪಲ್ಕೆ ಸವಿತಾ ಎ.ಪಿ ಮತ್ತು ದೇಜಪ್ಪರವರ ಪುತ್ರಿ.

Leave a Comment

error: Content is protected !!