ಕೊಲ್ಲಿ: ಸೂರ್ಯ – ಚಂದ್ರ ಜೋಡುಕರೆ ಕಂಬಳ ಸಮಿತಿಗೆ ಡಾ. ಹೆಗ್ಗಡೆಯವರು ಮಂಜೂರು ಮಾಡಿದ 2 ಲಕ್ಷದ ಚೆಕ್ ಹಸ್ತಾಂತರ

Suddi Udaya

ಬೆಳ್ತಂಗಡಿ: ಸೂರ್ಯ – ಚಂದ್ರ ಜೋಡುಕರೆ ಕಂಬಳ ಸಮಿತಿ ಕೊಲ್ಲಿ ಇದರ 26ನೇ ವರ್ಷದ ಕಂಬಳಕ್ಕೆ ಪೂಜ್ಯ ಖಾವಂದರು ಮಂಜೂರು ಮಾಡಿದ 2 ಲಕ್ಷದ ಚೆಕ್ ನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ , ಕಂಬಳ ಸಮಿತಿ ಅಧ್ಯಕ್ಷರಾದ ರಂಜನ್ ಜಿ ಗೌಡ ಇವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭ , ಸೂರ್ಯ ಚಂದ್ರ ಜೋಡು ಕರೆ ಕಂಬಳ ಸಮಿತಿ ಸ್ಥಾಪಕ ಅಧ್ಯಕ್ಷರು ಹಾಗೂ ತಾಲೂಕು ಜನ ಜಾಗೃತಿ ಅಧ್ಯಕ್ಷರು ಖಾಸಿಂ ಮಲ್ಲಿಗೆ ಮನೆ, ಕಂಬಳ ಸಮಿತಿ ಉಪಾಧ್ಯಕ್ಷರು ಸೀತಾ ರಾಮ ಗೌಡ , ಇನ್ನೋರ್ವ ಉಪಾಧ್ಯಕ್ಷರು ಹಸೈನಾರ್, ಕಾರ್ಯದರ್ಶಿ ಭರತ್ ಕುಮಾರ್, ವಲಯ ಮೇಲ್ವಿಚಾರಕರಾದ ಉಷಾ ಪ್ರಸಾದ್ , ಸೇವಾ ಪ್ರತಿನಿಧಿ ಅನುರಾಧ , ಒಕ್ಕೂಟದ ಪದಾಧಿಕಾರಿಗಳು ಹಾಗೂ ಕಂಬಳ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!