ಹೊಸಂಗಡಿಯಲ್ಲಿ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ

Suddi Udaya

ಹೊಸಂಗಡಿ : ಇಲ್ಲಿಯ ಹೊಸಂಗಡಿ ಎಂಬಲ್ಲಿ, ಕೆಎ 07 ಬಿ 5412 ನೇ ನೋಂದಣಿಯ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಫೆ.27ರಂದು ಮಧ್ಯಾಹ್ನ ಶ್ರೀಶೈಲ ಡಿ ಮುರಗೋಡ್‌ ಪಿಎಸ್‌ಐ (ಕಾ.ಸು) ವೇಣೂರು ಹಾಗೂ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಕಾಶಿಪಟ್ಣ ಗ್ರಾಮದ ಮಣಿಕಂಠ ನಿವಾಸಿ ವಸಂತ(27ವ) ಎಂಬಾತನು, ಯಾವುದೇ ಪರವಾನಗಿ ಇಲ್ಲದೇ, ಎಲ್ಲಿಂದಲೋ ನದಿಯಿಂದ ಮರಳನ್ನು ಕಳವು ಮಾಡಿ, ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು , ಟಿಪ್ಪರ್‌ ಲಾರಿಯನ್ನು ಮರಳಿನ ಸಮೇತ ಸ್ವಾಧೀನಪಡಿಸಿಕೊಂಡು, ಅರೋಪಿಯ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ವಾಧೀನಪಡಿಸಿದ ಟಿಪ್ಪರ್‌ ಲಾರಿಯ ಅಂದಾಜು ಮೌಲ್ಯ ರೂ 7 ಲಕ್ಷ ಹಾಗೂ 3 ಯೂನಿಟ್‌ ಮರಳಿನ ಅಂದಾಜು ಮೌಲ್ಯ ರೂ 8 ಸಾವಿರ ಆಗಬಹುದು ಎಂದು ಅಂದಾಜಿಸಲಾಗಿದೆ.

Leave a Comment

error: Content is protected !!