ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೊಬೈಲ್ ರಿಟೇಲರ್ ಅಸೋಸಿಯೇಷನ್ ಇದರ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಮಾಡಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಹರೀಶ್ ‘ಸ್ವಾತಿ ಮೊಬೈಲ್ಸ್ ಬೆಳ್ತಂಗಡಿ’, ಪ್ರದಾನ ಕಾರ್ಯದರ್ಶಿಯಾಗಿ ಅರ್ಷಾದ್ ‘ಇಮೇಜ್ ಮೊಬೈಲ್ ಬೆಳ್ತಂಗಡಿ’ ಮತ್ತು ಕೋಶಾಧಿಕಾರಿಯಾಗಿ ಇಲ್ಯಾಸ್ ‘ಸ್ಮಾರ್ಟ್ ಮೊಬೈಲ್ ಉಜಿರೆ’ ಇವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
AIMRA ಹಾಗು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಇದರ ನಿರ್ದೇಶನದ ಮೇರೆಗೆ DKUMRA ಉಪಾಧ್ಯಕ್ಷ ಉಮೇಶ್ ಬೆಳ್ತಂಗಡಿ ಹಾಗು ಪ್ರಧಾನ ಕಾರ್ಯದರ್ಶಿ ಅರಿಹಂತ್ ಜೈನ್ ರವರ ಉಪಸ್ಥಿತಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಳಿದಂತೆ ಸಮಿತಿ ಉಪಾಧ್ಯಕ್ಷರಾಗಿ ಸಚಿನ್ ಧರ್ಮಸ್ಥಳ, ರಾಜೇಶ್ ಸಿದ್ದಿವಿನಾಯಕ ಮಡಂತ್ಯಾರ್, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಮೊಬೈಲ್ ನೆಸ್ಟ್, ಕ್ರೀಡಾ ಮೇಲ್ವಿಚಾರಕರಾಗಿ ಜೆ.ಹೆಚ್ ಮುಜೀಬ್ ‘ಎಮ್ ಟೆಕ್’, ಹಿರಿಯ ಸಲಹೆಗಾರರಾಗಿ ರಾಘವೇಂದ್ರ ‘ಪಾಲ್ಸ್ ಮೊಬೈಲ್’ ಹಾಗು ಶರೀಫ್ ‘ಹೈಟೆಕ್ ಮೊಬೈಲ್ ಉಜಿರೆ,
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬುಸಾಲಿ ‘ಬಿ. ಎ ಮೊಬೈಲ್’ ಹಾಗೂ ಶರೀಫ್ ‘ಪಪ್ಪು ಮೊಬೈಲ್’ ಮಾದ್ಯಮ ಪ್ರತಿನಿಧಿಯಾಗಿ ಅಝರ್ ಇಮೇಜ್ ಮೊಬೈಲ್ ಉಜಿರೆ ಇವರನ್ನು ಆಯ್ಕೆ ಮಾಡಲಾಯಿತು.