ಕಾಯರ್ತಡ್ಕ : ಪುತ್ಯೆ ನಿವಾಸಿ ಮೋಹನ ಗೌಡ ಹೃದಯಾಘಾತದಿಂದ ನಿಧನ

Suddi Udaya

Updated on:

ಕಳೆಂಜ: ಇಲ್ಲಿಯ ಕಾಯರ್ತಡ್ಕ ಪುತ್ಯೆ ನಿವಾಸಿ ಮೋಹನ ಗೌಡ (62ವ.) ರವರು ಹೃದಯಾಘಾತದಿಂದ ಫೆ.28ರಂದು ಬೆಳಗ್ಗೆ ನಿಧನರಾದರು.


ಇವರು ಆರ್. ಎಸ್. ಎಸ್. ನ ಹಿರಿಯ ಕಾರ್ಯಕರ್ತರಾಗಿ, ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷರಾಗಿ, ಸೇವಾ ಶರಧಿ ಟ್ರಸ್ಟ್ ಕಾಯರ್ತಡ್ಕದ ಸ್ಥಾಪಕ ಅಧ್ಯಕ್ಷರು, ವೈಷ್ಣವಿ ಶಿಶು ಮಂದಿರ ಕಾಯರ್ತಡ್ಕದ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.


ಮೃತರು ಪತ್ನಿ ಸೀತಮ್ಮ, ಪುತ್ರರಾದ ವಿಕ್ರಮ್, ಬದರಿನಾಥ್, ದೇವಾನಂದ್, ಪುತ್ರಿ ಲೋಕೇಶ್ವರಿ, ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!