ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya


ಕೊಯ್ಯೂರು: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಕೊಯ್ಯೂರು ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ ಮುಂದಿನ 2 ವರ್ಷಗಳ ಅವಧಿಗೆ ಗೌರವ ಅಧ್ಯಕ್ಷರಾಗಿ ನವೀನ್ ಗೌಡ ವಾದ್ಯಕೋಡಿ, ಅಧ್ಯಕ್ಷರಾಗಿ ವಿಜಯ ಕುಮಾರ್ ಎಂ ಕೊಯ್ಯೂರು, ಉಪಾಧ್ಯಕ್ಷರುಗಳಾಗಿ ಮೋಹನದಾಸ್ ಪಾಂಬೇಲು,ಯಶವಂತ ಗೌಡ ಪೂರ್ಯಾಳ, ಕಾರ್ಯದರ್ಶಿಯಾಗಿ ವಿಶ್ವನಾಥ ಎಂ. ಯು.; ಜತೆ ಕಾರ್ಯದರ್ಶಿ ಯಾಗಿ ದಿನೇಶ್ ಗೌಡ ಜಾಲ್ನಪು; ಕೋಶಾಧಿಕಾರಿಯಾಗಿ ಗೋಪಾಲಕೃಷ್ಣ ಗೌಡ ಕಾಲಕುಮೇರು; ಮಹಿಳಾ ವೇದಿಕೆ ಅಧ್ಯಕ್ಷರಾಗಿ ಶ್ರೀಮತಿ ವನಿತಾ ಕಡಮಾಜೆ, ಮಹಿಳಾ ವೇದಿಕೆ ಕಾರ್ಯದರ್ಶಿಯಾಗಿ ಶ್ರೀಮತಿ ದೀಪಿಕಾ ದೇಲೋಡಿ, ಯುವ ವೇದಿಕೆ ಅಧ್ಯಕ್ಷರಾಗಿ ಅಜಿತ್ ಬಜಿಲ, ಕಾರ್ಯದರ್ಶಿಯಾಗಿ ಯತೀಶ್ ಕೆ..ಆಯ್ಕೆಯಾಗಿದ್ದಾರೆ. , ಜೊತೆ ಕಾರ್ಯದರ್ಶಿ ದಿನೇಶ್ ಗೌಡ ಜಾಲ್ನಪು ಆಯ್ಕೆಮಾಡಲಾಯಿತು.


ಈ ಸಂದರ್ಭದಲ್ಲಿ ತಾಲೂಕು ಸಂಘದ ನಿರ್ದೇಶಕರಾಗಿ ದಿನೇಶ್ ಬಿ.; ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನಾರಾಯಣಗೌಡ ವಾದ್ಯಕೋಡಿ, ದಾಮೋದರ ಗೌಡ ಬೆರ್ಕೆ, ನಾರಾಯಣ ಗೌಡ ಮೈಂದಕೋಡಿ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಗೀತಾ ರಾಮಣ್ಣ ಗೌಡ, ಉಪನ್ಯಾಸಕ ದಿನಾ ಕೊಕ್ಕಡ ಉಪಸ್ಥಿತರಿದ್ದರು.

Leave a Comment

error: Content is protected !!