ಬೆಳ್ತಂಗಡಿ ಸಂಜೀವಿನಿ ಸಂಸ್ಥೆಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Suddi Udaya

ಬೆಳ್ತಂಗಡಿ: ಬಂದಾರು ಗ್ರಾಮದ ಬನದಮಜಲು ಕೇಶವ ಇವರಿಗೆ ಅನಾರೋಗ್ಯದ ಕಾರಣ ಆರ್ಥಿಕ ಸಂಕಷ್ಟದಲ್ಲಿದ್ದು ಅವರಿಗೆ ಸಂಜೀವಿನಿ ಬೆಳ್ತಂಗಡಿ ಸಂಸ್ಥೆಯಿಂದ ತುರ್ತು ಯೋಜನೆಯಡಿಯಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಸಂಜೀವಿನಿ ಸದಸ್ಯರು ವಿತರಿಸಿದರು.

ಈ ಸಂದರ್ಭದಲ್ಲಿ ಸಂಜೀವಿನಿ ಬೆಳ್ತಂಗಡಿ ಸದಸ್ಯರಾದ ಹರ್ಷಿತ್ ಬೈಪಾಡಿ, ರಂಜಿತ್ ಅನಿಲ, ಸಂಪತ್ ಬೈಪಾಡಿ, ಸಂಗಮ್ ಬೈಪಾಡಿ, ರಂಜಿತ್ ಬೈಪಾಡಿ, ಚರಣ್ ಬೈಪಾಡಿ ಹಾಗೂ ಮೋಹನ್ ಬೈಪಾಡಿ ಉಪಸ್ಥಿತರಿದ್ದರು.

Leave a Comment

error: Content is protected !!