July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ: ಪೆರಿಂಜೆ ಮಲಿಯಾಳ ಪಲ್ಕೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹೊಸಂಗಡಿ : ಪೆರಿಂಜೆ ಮಲಿಯಾಳ ಪಲ್ಕೆ ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ನಡೆದ್ದಿದ್ದು ಈ ಬಗ್ಗೆ ಫೆ.29ರಂದು ವರದಿಯಾಗಿದೆ.

ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಪೆರಿಂಜೆ ಮಲಿಯಾಳ ಪಲ್ಕೆ ಎಂಬಲ್ಲಿ ಆರಂಬೋಡಿ – ಪಡ್ಯಾರಬೆಟ್ಟು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬೊಳ್ಳಾಜೆ ಎಂಬಲ್ಲಿಂದ ಶಾಂತಿಕಾಡು ಕಡೆಗೆ ವಸಂತರವರು ಸಹಸವಾರರಾಗಿ ಸವಾರಿ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನ ನಂ: ಕೆಎ 19 ಹೆಚ್‌ ಎನ್‌ 0984 ನೇದನ್ನು ಆರೋಪಿತ ಸವಾರ ಎಡ್ವರ್ಡ್‌ ಎಂಬವರು ಇಳಿಜಾರು ಹಾಗೂ ಕಿರಿದಾದ ಪ್ರದೇಶದಲ್ಲಿ ಎದುರಿನಿಂದ ಅಂದರೆ ಪಡ್ಯಾರಬೆಟ್ಟು ಕಡೆಯಿಂದ ಬರುತ್ತಿದ್ದ ಟಿಪ್ಪರ್‌ ಲಾರಿಯನ್ನು ಕಂಡು ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ ದ್ವಿಚಕ್ರ ವಾಹನವು ಡಾಮಾರು ರಸ್ತೆಯ ಅಂಚಿನಲ್ಲಿ ಅಂದರೆ ತಗ್ಗು(ಗುಂಡಿ) ಪ್ರದೇಶದಲ್ಲಿ ಚಲಾಯಿಸಿದಾಗ ಸಹಸವಾರರಾಗಿ ಕುಳಿತಿದ್ದ ವಸಂತರವರ ಹಿಡಿತ ತಪ್ಪಿ ದ್ವಿಚಕ್ರ ವಾಹನದಿಂದ ರಸ್ತೆಗೆ ಕುಸಿದು ಬಿದ್ದು, ಬೆನ್ನಿಗೆ ಗುದ್ದಿದ ಪರಿಣಾಮ ತೀವ್ರ ನೋವುಂಟಾದವರನ್ನು ಆರೋಪಿ ಸವಾರ ಹಾಗೂ ಇತರರು ಸೇರಿ ಖಾಸಗಿ ವಾಹನದಲ್ಲಿ ಕಾರ್ಕಳದ ಸ್ಪಂದನಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Related posts

ಅಳದಂಗಡಿ: ನೊಚ್ಚ ಮನೆತನದ ಕುವರಿ ನಿಯತಿ ಅಮೇರಿಕಾದಲ್ಲಿ ಯಕ್ಷಗಾನ ನಾಟ್ಯ ಪ್ರದರ್ಶನ

Suddi Udaya

ತಾ.ಪಂ ದಿಲ್ಲಿ ಯುವನಿಧಿ ಯೋಜನೆಯ ಫಲಾನುಭವಿಗಳ ನೈಜತೆಯ ಭೌತಿಕ ಪರಿಶೀಲನೆ

Suddi Udaya

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ : ಸಿಬಿಐ ಮೇಲ್ಮನವಿ

Suddi Udaya

ನಡ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya

ಮುಂಡಾಜೆ : ಶಿವಂ ಬೇಕರಿ ಮತ್ತು ಪ್ಲವರ್ ಡೆಕೋರೇಶನ್ ಶುಭಾರಂಭ

Suddi Udaya

ಯಕ್ಷಗಾನ ಕಲಾವಿದರ ಬಗ್ಗೆ ಅವಹೇಳನಕಾರಿ ಹೇಳಿಕೆ: ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲು

Suddi Udaya
error: Content is protected !!